Advertisement

Land Trades Builders: ಭಾರತ ಸೇವಾಶ್ರಮದಲ್ಲಿ ಹಿರಿಯ ನಾಗರಿಕರ ದಿನ ಆಚರಣೆ

11:49 PM Oct 01, 2024 | Team Udayavani |

ಮಂಗಳೂರು: ನಗರದ ಲ್ಯಾಂಡ್‌ ಟ್ರೇಡ್ಸ್‌ ಬಿಲ್ಡರ್ ಮತ್ತು ಡೆವಲಪರ್ ವತಿಯಿಂದ ಬಂಟ್ವಾಳ ತಾಲೂಕಿನ ಕನ್ಯಾನದಲ್ಲಿರುವ ಭಾರತ್‌ ಸೇವಾಶ್ರಮದ ಹಿರಿಯ ನಿವಾಸಿಗಳ ಜತೆ ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು.

Advertisement

10 ಸೆಂಟ್ಸ್‌ ಜಾಗದಲ್ಲಿ 1964ರಲ್ಲಿ ಐವರು ಅನಾಥರೊಂದಿಗೆ ಸೇವಾ ಶ್ರಮವನ್ನು ಆರಂಭಿಸಿದ ಸ್ಥಾಪಕ ಧಿರೇಂದ್ರನಾಥ್‌ ಭಟ್ಟಾಚಾರ್ಯ ಅವರ ಭಾವಚಿತ್ರದ ಮುಂದೆ ದೀಪ ಬೆಳಗಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಈ ವೇಳೆ ಲ್ಯಾಂಡ್‌ ಟ್ರೇಡ್ಸ್‌ ಮಾಲಕ ಕೆ.ಶ್ರೀನಾಥ ಹೆಬ್ಟಾರ್‌ ಮಾತನಾಡಿ, ಭಾರತ ಸೇವಾಶ್ರಮವು ಸಮಾಜಕ್ಕೆ ನೀಡುತ್ತಿರುವ ಮಾನವೀಯ ಸೇವೆ ಗಳನ್ನು ಸ್ಮರಿಸಿ ಸ್ಥಾಪಕರನ್ನು ಶ್ಲಾಘಿಸಿದರು.

ಧಿರೇಂದ್ರನಾಥ್‌ ಅವರು ಬಾಂಗ್ಲಾದಿಂದ ನಿರಾಶ್ರಿತರಾಗಿ ಇಲ್ಲಿಗೆ ಬಂದವರು, ತಮಗೆ ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ಸಾವಿರಾರು ಮಹಿಳೆಯರು, ಮಕ್ಕಳು ಹಾಗೂ ಮಾನಸಿಕ ಆರೋಗ್ಯ ಸವಾಲೆದುರಿಸುತ್ತಿರುವ ವರನ್ನು ಸಲಹಿದ್ದಾರೆ ಎಂದು ನೆನಪಿಸಿಕೊಂಡರು.

ಸ್ಥಾಪಕರ ಪತ್ನಿ ಸರೋಜಿನಿ ಅಮ್ಮ ಅವರನ್ನು ಹೆಬ್ಟಾರ್‌ ಇದೇ ಸಂದರ್ಭ ಸಮ್ಮಾನಿಸಿದರು. ಕಾರ್ಯದರ್ಶಿ ಈಶ್ವರ ಭಟ್‌ ಹಾಗೂ ಅವರ ಪತ್ನಿ, ಪರಶುರಾಮ್‌ ಅವರನ್ನು ಕೂಡ ಗೌರವಿಸಲಾಯಿತು.

Advertisement

ಈ ವೇಳೆ ಈಶ್ವರ ಭಟ್‌ ಮಾತನಾಡಿ, ಲ್ಯಾಂಡ್‌ಟ್ರೇಡ್ಸ್‌ ಸಂಸ್ಥೆಯವರು ಹಲವು ವರ್ಷಗಳಿಂದ ಸೇವಾಶ್ರಮಕ್ಕೆ ನೀಡುತ್ತಿರುವ ಸಹಕಾರ ಮತ್ತು ಕೊಡುಗೆಗಳನ್ನು ಸ್ಮರಿಸಿದರು. ಧಿರೇಂದ್ರನಾಥ್‌ ಅವರು ಸಾವಿರಾರು ಜನರ ಬದುಕನ್ನು ಬದಲಾಯಿಸಿದವರು, ಆರಂಭದ ಐವರು ಅನಾಥರಲ್ಲಿ ಒಬ್ಬರು ಬ್ಯಾಂಕ್‌ ಮ್ಯಾನೇಜರ್‌ ಆಗಿ ನಿವೃತ್ತರಾದರೆ ಉಳಿದವರು ಕೂಡ ತಮ್ಮ ಯಶಸ್ವಿ ಜೀವನ ಕಂಡಿದ್ದಾರೆ, ಇದುವರೆಗೆ 13 ಮಂದಿ ಸೈನಿಕರಾಗಿದ್ದಾರೆ, ಇಬ್ಬರು ಸಾಫ್ಟ್‌ ವೇರ್‌ ಎಂಜಿನಿಯರ್‌ಗಳಾಗಿ ಯುಎಸ್‌ಎನಲ್ಲಿದ್ದಾರೆ, ಅನೇಕ ಮಹಿಳೆಯರು ಅನಾಥರಾಗಿ ಬಂದವರು ಶಿಕ್ಷಣ ಪಡೆದು ಬದುಕಿನಲ್ಲಿ ಸಾರ್ಥಕತೆ ಕಂಡಿದ್ದಾರೆ ಎಂದು ಹೇಳಿದರು.

ಆಶ್ರಮವಾಸಿಗಳಿಗೆ ಪೂರಕವಾದ ಕಾಣಿಕೆ, ಹೊದಿಕೆ,ಬೆಚ್ಚಗಿನ ಬಟ್ಟೆ, ವೈದ್ಯಕೀಯ ಉಪಕರಣ ಇತ್ಯಾದಿಗಳನ್ನು
ವಿತರಿಸಲಾಯಿತು. ಪ್ರಸ್ತುತ ಸೇವಾಶ್ರಮದಲ್ಲಿ 130 ಹಿರಿಯ ನಾಗರಿಕರು, 20 ಅನಾಥರು ಆಶ್ರಯ ಪಡೆದಿದ್ದಾರೆ.

ಲ್ಯಾಂಡ್‌ಟ್ರೇಡ್ಸ್‌ ಸಿಇಒ ರಮೀತ್‌ ಕುಮಾರ್‌ ಸಿದ್ದಕಟ್ಟೆ ನಿರೂಪಿಸಿದರು. ಎಚ್‌ಆರ್‌ ಹಾಗೂ ಅಡ್ಮಿನ್‌ ಪದ್ಮನಾಭ ಶೆಟ್ಟಿ, ಮಾರ್ಕೆಟಿಂಗ್‌ ಮುಖ್ಯಸ್ಥ ದರ್ಶನ್‌ ಪಿ.ವಿ. ಸಂಯೋಜಿಸಿದರು. ವಿದ್ಯಾಲಕ್ಷ್ಮಿ ಹಾಗೂ ನಿಯತ ಭಟ್‌ ಸಹಕಾರವಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next