Advertisement

ನಿವೇಶನದ ಗಲಾಟೆ ಮಗನ ಕೈಗೆ ಮಾರಕಾಸ್ತ್ರ ಕೊಟ್ಟ ತಾಯಿ!

03:46 PM Jun 13, 2023 | Team Udayavani |

ನೆಲಮಂಗಲ: ಗ್ರಾಮದಲ್ಲಿರುವ ನಿವೇಶನದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಪ್ರಾರಂಭವಾದ ಜಗಳ ಮಾರಕಾಸ್ತ್ರಗಳಿಂದ ಹಲ್ಲೆ ನಡೆದು ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಘಟನೆ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ.

Advertisement

ಘಟನೆ ವಿವರ: ಮೊಹಮದ್‌ ಜಾವೀದ್‌ (47), ನಸೀಮ್‌ ತಾಜ್‌ (43), ಮೊಹಮದ್‌ ಆಬಿದ್‌ (43) ಗಾಯಾಳುಗಳು.

ಇವರು ಎಂದಿನಂತೆ ಸೋಮವಾರ ಮಧ್ಯಾಹ್ನ ಸುಮಾರು 12ಗಂಟೆ ವೇಳೆಯಲ್ಲಿ ತಮ್ಮ ಮನೆಯ ಬಳಿಯಲ್ಲಿದ್ದ ವೇಳೆ ಜಮೀರ್‌, ಈತನ ತಮ್ಮ ಜಹೀರ್‌ ಹಾಗೂ ತಾಯಿ ಶಂಷಾದ್‌ ಅವರು ಗಾಯಾಳುಗಳ ಮನೆಯ ಬಳಿಯಲ್ಲಿದ್ದ ಖಾಲಿ ನಿವೇಶನವನ್ನು ಜೆಸಿಬಿ ಯಂತ್ರದ ಮೂಲಕ ಸ್ವಚ್ಛಗೊಳಿಸಲು ಮುಂದಾದಾಗ ಗಾಯಾಳುಗಳು ಆರೋಪಿತ ಮೂರು ಮಂದಿಯನ್ನು ನಮ್ಮ ನಿವೇಶನ ಯಾಕೆ ಜೆಸಿಬಿಯಲ್ಲಿ ಸ್ವಚ್ಛಗೊಳಿಸುತಿದ್ದೀರಾ ಎಂದು ಪ್ರಶ್ನಿಸಿದಾಗ ಎರಡು ಗುಂಪುಗಳ ನಡುವೆ ವಾಗ್ವಾದ ಸಂಭವಿಸಿದೆ, ಈ ವೇಳೆ ಅಲ್ಲಿಯೇ ಇದ್ದ ಅಪರಾಧಿಗಳು ತಾಯಿ ಶಂಷಾದ್‌ ಎಂಬಾಕೆ ಮಗ ಜಮೀರ್‌ ಎಂಬಾತನ ಕೈಗೆ ಚಾಕು ಕೊಟ್ಟಿದ್ದು ಇದರಿಂದ ಆಕ್ರೋಶಗೊಂಡ ಜಮೀರ್‌ ಮೂರು ಮಂದಿ ಗಾಯಾಳುಗಳ ಮೇಲೆ ಹಲ್ಲೆ ಮಾಡಿದ್ದಾನೆ , ಈ ಕುರಿತಾಗಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪರಾಧಿಗಳು ಪರಾರಿಯಾಗಿದ್ದಾರೆ.

ಪ್ರಕರಣ ದಾಖಲಿಸಿ ಕೊಂಡಿರುವ ಗ್ರಾಮಾಂತರ ಪೊಲೀಸ್‌ಠಾಣೆ ಇನ್ಸ್ ಪೆಕ್ಟರ್‌ ರಾಜೀವ್‌ ಹಲ್ಲೆಕೋರರ ಬಂಧನಕ್ಕೆ ಬಲೆಬೀಸಿದ್ದಾರೆ. ಗಾಯಾಳುಗಳು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next