Advertisement

ಠಾಣೆಗೆ ಹಾಜರಾದ ಲಕ್ಷ್ಮೀ-ಸುಂದರ್‌‌; ದುನಿಯಾ ವಿಜಿ ಸಾಥ್‌ 

03:49 PM Mar 09, 2018 | |

ಬೆಂಗಳೂರು: ಮೈಸೂರಿನ ದೇವಾಲಯದಲ್ಲಿ ವಿವಾಹವಾಗಿದ್ದ ಶಾಸಕ ಶಿವಮೂರ್ತಿ ನಾಯಕ್‌ ಅವರ ಪುತ್ರಿ ಲಕ್ಷ್ಮೀ ನಾಯಕ್‌ ಹಾಗೂ ಚಿತ್ರನಿರ್ಮಾಪಕ ಪಿ.ಸುಂದರ್‌ ಇಂದು ಶುಕ್ರವಾರ ಯಲಹಂಕ ನ್ಯೂಟೌನ್‌ ಪೊಲೀಸ್‌ ಠಾಣೆಗೆ ಹಾಜರಾಗಿ ನಾವು ಪರಸ್ಪರ ಪ್ರೀತಿಸುತ್ತಿದ್ದು  ಸ್ವಇಚ್ಛೆಯಿಂದಲೇ ವಿವಾಹವಾಗಿರುವುದಾಗಿ ಹೇಳಿಕೆ ನೀಡಿದ್ದಾರೆ. 

Advertisement

ಲಕ್ಷ್ಮೀ ಹಾಗೂ ಸುಂದರ್‌ ಗೌಡ ವಿವಾಹವಾದ ಬಳಿಕ ನಟ ದುನಿಯಾ ವಿಜಯ್‌ ಅವರ ಕತ್ರಿಗುಪ್ಪೆ ನಿವಾಸಕ್ಕೆ ಆಗಮಿಸಿದ್ದರು. ನಿವಾಸದಿಂದ ಕಾರಿನಲ್ಲಿ ಠಾಣೆಗೆ ತೆರಳಿ ಹೇಳಿಕೆ ನೀಡಿದ್ದಾರೆ. ಈ ವೇಳೆ ದುನಿಯಾ ವಿಜಯ್‌ ಅವರು ಜೊತೆಗಿದ್ದರು. 

ಠಾಣಾಧಿಕಾರಿಯ ಮುಂದೆ ಹೇಳಿಕೆ ನೀಡಿ ಚನ್ನಮ್ಮನ ಅಚ್ಚುಕಟ್ಟು ಪ್ರದೇಶದಲ್ಲಿರುವ ಸುಂದರ್‌ ನಿವಾಸಕ್ಕೆ ತೆರಳಿ ಸುದ್ದಿಗೋಷ್ಠಿಯನ್ನು ನಡೆಸಿದರು.

‘ನಮ್ಮಿಂದ ಯಾರಿಗಾದರು ತೊಂದರೆಯಾದರೆ ಕ್ಷಮಿಸಿ, ಲಕ್ಷ್ಮೀ ಮನೆಯಲ್ಲಿ ವಿರೋಧಿಸಿದ್ದರಿಂದ ಈ ರೀತಿ ವಿವಾಹವಾಗಿದ್ದೇವೆ. ಮುಂದೆ ಎಲ್ಲವೂ ಸರಿ ಹೋಗುವ ವಿಶ್ವಾಸವಿದೆ’ ಎಂದರು.

ಕಣ್ಣೀರಿಡುತ್ತಿರುವ ಲಕ್ಷ್ಮೀ ಕುಟುಂಬ 

Advertisement

ಲಕ್ಷ್ಮೀ ತಾಯಿ ಚೀಫ್ ಮೆಡಿಕಲ್‌ ಆಫೀಸರ್‌ ಆಗಿರುವ ಡಾ.ಗೀತಾ ಮಾಧ್ಯಮದ ಎದುರು ಮಗಳ ಪ್ರಕರಣದಿಂದ ನೊಂದು ಕಣ್ಣೀರಿಟ್ಟಿದ್ದಾರೆ. 

ನನ್ನ ಮಗಳಿಗೆ 23 ವರ್ಷ,ಸುಂದರ್‌ಗೆ 36 ವರ್ಷ ಪ್ರಾಯ. ಅವನು ಮಾಸ್ತಿಗುಡಿ ದುರಂತ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದವನು, ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನಾ ಎಂದು ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ.

ಎಂಬಿಬಿಎಸ್‌ ವಿದ್ಯಾರ್ಥಿನಿ!
ಲಕ್ಷ್ಮೀ ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜಿನಲ್ಲಿ 3 ನೇ ವರ್ಷದ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದು, ಕಳೆದ 7 ತಿಂಗಳ ಹಿಂದೆ ಸುಂದರ್‌ ಜೊತೆ ಪ್ರೇಮಾಂಕುವಾಗಿತ್ತು. 

ಇವೆಂಟ್‌ ಮ್ಯಾನೇಜರ್‌ ಆಗಿರುವ ಸುಂದರ್‌ ತಂಗಿಯ ಗಂಡನ  ಮೂಲಕ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next