Advertisement

BJP: ಲಕ್ಷ್ಮಣ ಸವದಿ ಮಾನಸಿಕವಾಗಿ ಬಿಜೆಪಿಯಲ್ಲೇ ಇದ್ದಾರೆ: ಬಿ.ವೈ. ವಿಜಯೇಂದ್ರ

10:20 PM Jan 26, 2024 | Team Udayavani |

ಶಿವಮೊಗ್ಗ: ಶಾಸಕ ಲಕ್ಷ್ಮಣ್‌ ಸವದಿ ಅವರು ಹಿರಿಯರಿದ್ದಾರೆ. ದೈಹಿಕವಾಗಿ ಅವರು ಕಾಂಗ್ರೆಸ್‌ನಲ್ಲಿದ್ದರೂ, ಮಾನಸಿಕವಾಗಿ ಬಿಜೆಪಿಯಲ್ಲಿರುತ್ತಾರೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವಾಗಿ ಯಾರ ಹಿಂದೆ ಹೋಗುತ್ತಿಲ್ಲ.

Advertisement

ಅವರೇ ಬರುತ್ತಿದ್ದಾರೆ. ಪಕ್ಷಕ್ಕೆ ಯಾರು ಬಂದರೂ ಸ್ವಾಗತ. ಕಾಂಗ್ರೆಸ್‌ ಮೊದಲು ಇರುವವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ. ಇಂಟಲಿಜೆನ್ಸ್‌ ಫೇಲ್‌ ಆಗಿದೆ ಅಂತ ಸಿಎಂ ತಲೆಕೆಡಿಸಿಕೊಂಡಿದ್ದಾರೆ. ಬರುವಂತಹ ದಿನಗಳಲ್ಲಿ ಬಹಳ ಬದಲಾವಣೆ ಆಗಲಿದೆ. ಜಗದೀಶ್‌ ಶೆಟ್ಟರ್‌ ಯಾವುದೇ ಕಂಡೀಶನ್‌ ಹಾಕಿಲ್ಲ ಎಂದು ವಿಜಯೇಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next