Advertisement

ಕುಷ್ಟಗಿ: ಸಿ.ಸಿ. ಸ್ಲ್ಯಾಬ್ ಅವೈಜ್ಞಾನಿಕ: ಸ್ಥಳೀಯರ ಆರೋಪ

03:11 PM Jun 15, 2022 | Team Udayavani |

ಕುಷ್ಟಗಿ: ಕಂದಕೂರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿಮೆಂಟ್ ಕಾಂಕ್ರೀಟ್ ಸ್ಲ್ಯಾಬ್ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

Advertisement

ಲೋಕೋಪಯೋಗಿ ಇಲಾಖೆಯ 28 ಲಕ್ಷ ರೂ. ವೆಚ್ಚದ ಕಾಮಗಾರಿಯನ್ನು ಗಿರೀಶ ಕೆ. ಎಂಬವರು ಗುತ್ತಿಗೆ ನಿರ್ವಹಿಸುತ್ತಿದ್ದಾರೆ.

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಬನ್ನಿ ಗಿಡದವರೆಗೆ ಸಿಸಿ ರಸ್ತೆ, ಚರಂಡಿ ಹಾಗೂ ಸಿಡಿ ನಿರ್ಮಿಸಬೇಕಿದೆ. ಗುತ್ತಿಗೆದಾರರು ಸಿ.ಸಿ. ಸ್ಲ್ಯಾಬ್ ನಿರ್ಮಾಣಕ್ಕೆ ಪಾಟೀಕಲ್ಲು ಬಳಸುತ್ತಿದ್ದು, ಈ ಸಿಡಿ ಬಾಳಿಕೆ ಬರುವುದಿಲ್ಲ. ಈ ಸಿಡಿ ಬಹುಬೇಗನೆ ಕುಸಿಯುವ ಸಾದ್ಯತೆಗಳಿವೆ ಎಂದು ಗ್ರಾಮದ ಶರಣಪ್ಪ ತಾವರಗೇರಿ ಆರೋಪಿಸಿದ್ದಾರೆ.‌

ಸಿಡಿ ನಿರ್ಮಾಣ ದುರ್ಬಲವಾಗಿದ್ದು, ಪಾಟೀಕಲ್ಲು ಬದಲಿಗೆ ವೈಜ್ಞಾನಿಕವಾಗಿ ಸಿಡಿ ‌ನಿರ್ಮಿಸಬೇಕಿದೆ. ಕಾಟಾಚಾರಕ್ಕೆ ಕಾಮಗಾರಿ ನಡೆಸದೇ ವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next