Advertisement

ಕುಷ್ಟಗಿ: ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ; ಸರಣೆ ಅಪಘಾತ: ತಾತ್ಕಾಲಿಕ ತಡೆಗೋಡೆ ನಿರ್ಮಾಣ

02:30 PM Apr 16, 2023 | Team Udayavani |

ಕುಷ್ಟಗಿ: ಪಟ್ಟಣದ 3ನೇ ವಾರ್ಡಿನ ಹಳೆ ಕುರಬನಾಳ ಇಕ್ಕಟ್ಟಾದ ರಸ್ತೆಯ ಪಕ್ಕದ ಚರಂಡಿಯಿಂದ ವಾಹನ ಸವಾರರು ಮುಗುಚಿ ಬೀಳುತ್ತಿರುವ ಪ್ರಕರಣಕ್ಕೆ ಪುರಸಭೆ ತಾತ್ಕಾಲಿಕ ಬ್ರೇಕ್ ಹಾಕಿದೆ.

Advertisement

ಕುಷ್ಟಗಿ ಪಟ್ಟಣದ ಕಾರ್ಗಿಲ್ ರಸ್ತೆಯಿಂದ 3 ನೇ ವಾರ್ಡ್ ಮೂಲಕ ರಸ್ತೆಯ ಕೂಡು ರಸ್ತೆಯಲ್ಲಿ ಚರಂಡಿ ಅರ್ಧಕ್ಕೆ ನಿಂತು‌ ಚರಂಡಿ ನೀರು ಅಲ್ಲಿಯೆ ಜಮೆಯಾಗುತ್ತಿತ್ತು. ಅಲ್ಲಿ ಹುಲ್ಲು ಮುಳ್ಳು ಬೆಳೆದಿದ್ದರಿಂದ ಎದುರಿಗೆ‌ ಬರುವ ವಾಹನಕ್ಕೆ‌ ಬೈಕ್ ಸವಾರರು, ಕಾರು ಚಾಲಕರು ಸೈಡ್ ತೆಗೆದುಕೊಟ್ಟು ಸಹಕರಿಸಲು ಹೋದರೆ ಬೈಕ್ ಸಮೇತ ಸವಾರರಿಗೆ ಚರಂಡಿ ಕೊಚ್ಚೆಯ ದರ್ಶನವಾಗುತ್ತಿತ್ತು. ಕಾರು, ಗೂಡ್ಸ್ ವಾಹನ, ಬಸ್ ಗಳು ಸಿಲುಕಿಕೊಳ್ಳುತ್ತಿರುವ ಪರಿಣಾಮ ಜೆಸಿಬಿಯಿಂದ ಸಿಲುಕಿದ ವಾಹನ ಮೇಲಕ್ಕೆ ಎತ್ತುವ ಪರಿಸ್ಥಿತಿ ಇತ್ತು. ಈ ಕುರಿತು ಹಿಂದಿನ ಮುಖ್ಯಾಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನೆ ಆಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಉದಯವಾಣಿ ಡಿಜಿಟಲ್ ವೆಬ್ ನ್ಯೂಸ್ ನಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಧರಣೇಂದ್ರ‌ ಕುಮಾರ್‌, ಎಪ್ರೀಲ್ 16 ರಂದು ಬೆಳಗ್ಗೆ ಖುದ್ದಾಗಿ ಸ್ಥಾನಿಕ ಪರಿಶೀಲನೆ ನಡೆಸಿ, ಜೆಸಿಬಿ ಹಾಗೂ ಪೌರ ಕಾರ್ಮಿಕರೊಂದಿಗೆ  ಅಲ್ಲಿ ಬೆಳೆದಿದ್ದ ಹುಲ್ಲು-ಮುಳ್ಳುಗಳನ್ನು ತೆರವುಗೊಳಿಸಿ, ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ಸಂಭವನೀಯ ಅಪಘಾತಗಳಿಗೆ‌ ಬ್ರೇಕ್ ಹಾಕಿದರು.

ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ಸ್ಪಂದನೆಗೆ ವಾರ್ಡಿನ ಜನತೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next