Advertisement

ಕುರುಗೋಡಲ್ಲಿ ಉತ್ತಮ ಮಳೆ

04:55 PM Jul 02, 2020 | Naveen |

ಕುರುಗೋಡು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ಸಂಜೆ ಉತ್ತಮ ಮಳೆ ಸುರಿದಿದೆ. ಮಳೆ ಸುರಿದ ಪರಿಣಾಮ ಶಡ್‌ನ‌ಲ್ಲಿ ವ್ಯಾಪಾರ ಮಾಡುವ ಹಲವು ತರಕಾರಿ ವ್ಯಾಪಾರಸ್ಥರಿಗೆ ತೊಂದರೆಯಾಯಿತು. ವಾಹನ ಸವಾರರು ಪರದಾಡುವಂತಾಯಿತು.

Advertisement

ಬೇರೆ ಕಡೆ ತೆರಳುವ ಪ್ರಯಾಣಿಕರು ಅಕ್ಕಪಕ್ಕದ ಕಿರಾಣಿ ಅಂಗಡಿಗಳ ಗೂಡು ಸೇರಿದರು. ಜಿಲ್ಲಾದ್ಯಂತ ಕೋವಿಡ್ ಕೇಕೆ ಹಾಕುತ್ತಿರುವ ವೇಳೆ ಪಟ್ಟಣದ ಜನರು ಹೊರಗಡೆ ಸಂಚಾರ ಕಡಿಮೆಯಾಗಿದ್ದು, ಬೇಸಿಗೆಯ ತಾಪದಲ್ಲಿ ಮನೆಯಲ್ಲೇ ಕಾಲಕಳೆಯುವ ಅನಿವಾರ್ಯತೆಯಲ್ಲಿ ಮಳೆರಾಯ ಕೃಪೆ ತೋರಿದ್ದಕ್ಕೆ ಜನರು ನಿಟ್ಟಿಸಿರು ಬಿಟ್ಟಿದ್ದಾರೆ. ಗ್ರಾಮೀಣ ಭಾಗದಲ್ಲಿ ರೈತರ ಬಿತ್ತನೆ ಕಾರ್ಯ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next