Advertisement

ಕುರ್ಲಾ ಪೂರ್ವ ಬಂಟರ ಭವನ ಪತ್ತನಾಜೆ ತುಳು ಚಲನಚಿತ್ರ ಪ್ರದರ್ಶನ

01:43 PM Oct 24, 2017 | Team Udayavani |

ಮುಂಬಯಿ: ಕಲಾಜಗತ್ತು ಕ್ರಿಯೇಷನ್ಸ್‌ನಿಂದ ಶೀಘ್ರದಲ್ಲಿ ಮುಂಬಯಿ ಕಲಾವಿದರನ್ನು ಒಟ್ಟು ಸೇರಿಸಿಕೊಂಡು ಮುಂಬಯಿಯಲ್ಲೇ ನೂತನ ತುಳು ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಾಗುವುದು. ಅಣ್ಣ ರಾಘು ಅಣ್ಣ ಎಂಬ ಶೀರ್ಷಿಕೆಯ ಈ ತುಳುಚಿತ್ರದಲ್ಲಿ ಹಾಸ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುವುದು. ನನ್ನ ಮೊದಲ ಚಿತ್ರ “ಪತ್ತನಾಜೆ’ಗೆ ಮುಂಬಯಿಗರಿಂದ ಉತ್ತಮ ಪ್ರೋತ್ಸಾಹ, ಸಹಕಾರ, ಬೆಂಬಲ ದೊರೆತಿದೆ ಎನ್ನಲು ಸಂತೋಷವಾಗುತ್ತಿದೆ ಎಂದು ತುಳು ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಕಲಾಜಗತ್ತು ವಿಜಯಕುಮಾರ್‌ ಶೆಟ್ಟಿ ತೋನ್ಸೆ ಅವರು ನುಡಿದರು.

Advertisement

ಅ. 2ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜರಗಿದ “ಪತ್ತನಾಜೆ’ ತುಳು ಚಿತ್ರ ಪ್ರದರ್ಶನದ ಪ್ರಾರಂಭದಲ್ಲಿ ಜರಗಿದ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂಬಯಿಯ ಕಲಾಪ್ರೇಮಿಗಳು ಹಾಗೂ ಕಲಾಪೋಷಕರು ನನ್ನ ಎಲ್ಲಾ ಕಲಾಸೇವೆಯನ್ನು ಬೆಂಬಲಿಸುತ್ತಿದ್ದಾರೆ. ದಾನಿಗಳ ನಿರಂತರ ಸಹಕಾರವೂ ನನಗೆ ದೊರೆತಿದೆ. ನನ್ನಮುಂದಿನ ಚಿತ್ರಗಳಿಗೆ ಮುಂಬಯಿಗರ ಸಹ ಕಾರ ಬಯಸುತ್ತಿದ್ದೇನೆ. ಇದಕ್ಕೆ ಸಂಪೂರ್ಣ ಬೆಂಬಲ ದೊರೆಯಲಿದೆ ಎಂಬ ವಿಶ್ವಾಸವಿದೆ ಎಂದರು.

ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ವಿಶ್ವ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು, ವಿಜಯಣ್ಣನವರ ಕಲಾಸೇವೆಯನ್ನು ಎಲ್ಲರೂ ಗೌರವಿಸಬೇಕಾಗುತ್ತದೆ. ಅವರು ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರೂ ಅದರಲ್ಲಿ ಸಾಧನೆಯನ್ನು ಮಾಡುತ್ತಾರೆ. ಅವರ ಅಭಿಮಾನಿಗಳ ತಂಡವೇ ಮುಂಬಯಿ ಯಲ್ಲಿದೆ. ಸಾವಿರಾರು ಕಲಾವಿದರನ್ನು ರೂಪಿ ಸಿದ ಇವರು ಇದೀಗ ಚಿತ್ರರಂಗವನ್ನು ಪ್ರವೇಶಿಸಿ ರುವಾಗ ಅವರಿಗೆ ಸಂಪೂರ್ಣ ಸಹಕಾರವನ್ನು ನಾವು ನೀಡಬೇಕಾಗಿದೆ ಎಂದು ನುಡಿದು,  ತುಳು ಚಿತ್ರರಂಗದಲ್ಲಿ ಅವರು ಒಂದು ಕ್ರಾಂತಿಯನ್ನು ನಿರ್ಮಿಸಲಿ ಎಂದು ಶುಭ ಹಾರೈಸಿದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರು ಮಾತನಾಡಿ, ವಿಜಯಣ್ಣನವರ ಪತ್ತನಾಜೆ ಚಿತ್ರವು ಈಗಾಗಲೇ ಪ್ರೇಕ್ಷಕರ ಮನಗೆದ್ದಿದೆ. ಅವರ ಮುಂದಿನ ಚಿತ್ರವು ಪ್ರೇಕ್ಷಕರ ಮನಸ್ಸನ್ನು ಗೆಲ್ಲಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಚಿತ್ರಕಲಾವಿದರಾದ ರೇಷ್ಮಾ ಶೆಟ್ಟಿ, ಪ್ರತೀಕ್‌ ಶೆಟ್ಟಿ, ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಸದ್ಯದಲ್ಲೇ ಪ್ರದರ್ಶನ ಕಾಣಲಿರುವ ಅಂಬರ್‌ ಕ್ಯಾಟರರ್ ಚಿತ್ರದ ನಾಯಕ ಸೌರಭ್‌ ಭಂಡಾರಿ ಅವರನ್ನು ಗಣ್ಯರು ಗೌರವಿಸಿದರು. ಪತ್ತನಾಜೆ ಚಿತ್ರದ ಹೆಚ್ಚಿನ ಕಲಾವಿದರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುರೋಹಿತ ವಿದ್ವಾನ್‌ ಪ್ರವೀಣ್‌ ಭಟ್‌ ಅವರು ಆಶೀರ್ವಚನ ನೀಡಿ, ಮುಂದಿನ ಚಿತ್ರಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸಿಎ ಐ. ಆರ್‌. ಶೆಟ್ಟಿ, ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಎರ್ಮಾಳ್‌ ಹರೀಶ್‌ ಶೆಟ್ಟಿ, ಶಾಂತಾರಾಮ್‌ ಶೆಟ್ಟಿ, ಕಡಂದಲೆ ಸುರೇಶ್‌ ಭಂಡಾರಿ, ರತ್ನಾಕರ ಶೆಟ್ಟಿ ಮುಂಡ್ಕೂರು, ನವಿಮುಂಬಯಿ ಮಾಜಿ ನಗರ ಸೇವಕ ಸಂತೋಷ್‌ ಶೆಟ್ಟಿ, ಉದ್ಯಮಿ ಕೃಷ್ಣ ವೈ. ಶೆಟ್ಟಿ, ಗಣೇಶ್‌ ಶೆಟ್ಟಿ ಐಕಳ, ಗಿಲ್ಬರ್ಟ್‌ ಡಿಸೋಜಾ, ಜಯಪ್ರಕಾಶ್‌ ಶೆಟ್ಟಿ, ಪಿ. ಡಿ. ಶೆಟ್ಟಿ, ರಾಘು ಪಿ. ಶೆಟ್ಟಿ, ಅನಿಲ್‌ ಶೆಟ್ಟಿ ಏಳಿಂಜೆ, ಬೊಲಾ°ಡುಗುತ್ತು ಚಂದ್ರಹಾಸ ರೈ, ಕಿಶೋರ್‌ ಶೆಟ್ಟಿ ಕುತ್ಯಾರ್‌, ರವೀಂದ್ರನಾಥ ಭಂಡಾರಿ, ಅಶೋಕ್‌ ಪಕ್ಕಳ, ದಿವಾಕರ ಶೆಟ್ಟಿ ಕುರ್ಲಾ, ಡಾ| ಸುನೀತಾ ಎಂ. ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ. ಸಿಎ ಹರೀಶ್‌ ಶೆಟ್ಟಿ, ಯಶವಂತ್‌ ಶೆಟ್ಟಿ, ಶಿವರಾಮ ಜಿ. ಶೆಟ್ಟಿ, ಪ್ರವೀಣ್‌ ಭೋಜ ಶೆಟ್ಟಿ, ದಿವಾಕರ ಶೆಟ್ಟಿ, ಹರೀಶ್‌ ಎಸ್‌. ಶೆಟ್ಟಿ, ದಿನಕರ ಶೆಟ್ಟಿ, ಸುಧೀರ್‌ ಆರ್‌. ಎಲ್‌. ಶೆಟ್ಟಿ, ಚಂದ್ರಹಾಸ ಶೆಟ್ಟಿ, ಗುಣಪಾಲ್‌ ಶೆಟ್ಟಿ ಐಕಳ, ಸಿಎ ಸದಾಶಿವ ಶೆಟ್ಟಿ, ನವೀನ್‌ ಶೆಟ್ಟಿ ಇನ್ನಬಾಳಿಕೆ ಮೊದಲಾದವರು ಉಪಸ್ಥಿತರಿದ್ದರು.

Advertisement

ಕಲಾವಿದರಾದ ಸುರೇಂದ್ರ ಕುಮಾರ್‌ ಹೆಗ್ಡೆ, ಎನ್‌. ಪೃಥ್ವಿರಾಜ್‌ ಮುಂಡ್ಕೂರು ಮೊದಲಾದವರು ಉಪಸ್ಥಿತರಿದ್ದರು. ಅನಂತರ ಪತ್ತನಾಜೆ ಚಿತ್ರವು ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಪತ್ರಕರ್ತ ದಯಾಸಾಗರ್‌ ಚೌಟ ಅವರು ಕಾರ್ಯಕ್ರಮ ನಿರ್ವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next