Advertisement

ಕುಂದೇಶ್ವರ ದೇವಸ್ಥಾನ: ಲಕ್ಷದೀಪೋತ್ಸವ ಸಂಭ್ರಮ

01:45 AM Dec 07, 2018 | Karthik A |

ಕುಂದಾಪುರ: ಇಲ್ಲಿನ ಪ್ರಸಿದ್ಧ ಶ್ರೀ ಕುಂದೇಶ್ವರ ದೇವಾಲಯದಲ್ಲಿ ಗುರುವಾರ ಲಕ್ಷದೀಪೋತ್ಸವ ಮತ್ತು ರಥೋತ್ಸವಕ್ಕಾಗಿ ನಾಡಿನ ಬೇರೆ ಬೇರೆ ಕಡೆಗಳಿಂದ ಸಾವಿರಾರು ಮಂದಿ ಆಗಮಿಸಿದ್ದರು. ಬೆಳಗ್ಗೆ ಶ್ರೀ ಕುಂದೇಶ್ವರನ ಸನ್ನಿಧಿಯಲ್ಲಿ ಶತರುದ್ರಾಭಿಷೇಕ, ಮಹಾಪೂಜೆ, ಮಹಾ ಮಂಗಳಾರತಿ ನಡೆದು  ಬೆಳಗ್ಗೆಯಿಂದ ಸಂಜೆವರೆಗೆ ತಾಲೂಕಿನ ವಿವಿಧ ಭಜನ ಮಂಡಳಿಗಳಿಂದ ಶ್ರೀ ದೇವರ ನಾಮ ಸಂಕೀರ್ತನೆ, ಭಜನೆ ನಡೆಯಿತು. ನೃತ್ಯವಿದುಷಿ ಪ್ರವಿತಾ ಅಶೋಕ್‌ ಅವರ ನಿರ್ದೇಶನದಲ್ಲಿ ನೃತ್ಯವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯಸಿಂಚನ ನಡೆಯಿತು.

Advertisement


ಕುಂದಾಪುರ ಹೆಸರು ಬರಲು ಮೂಲಕಾರಣನಾದ ಊರಿನ ಅಧಿದೇವತೆ ಶ್ರೀ ಕುಂದೇಶ್ವರ. ಶತ-ಶತಮಾನಗಳ ಇತಿಹಾಸವುಳ್ಳ ಶ್ರೀ ಕುಂದೇಶ್ವರ ಸಹಸ್ರ ಸಹಸ್ರ ಭಕ್ತಾದಿಗಳ ಹೃದಯದಲ್ಲಿ ನೆಲೆ ನಿಂತಿದ್ದಾನೆ. ಹಾಗಾಗಿ ಇಲ್ಲಿನ ದೀಪೋತ್ಸವ, ರಥೋತ್ಸವ ಭಕ್ತರಿಗೆ ಅಪೂರ್ವವಾಗಿದೆ. ಈಚೆಗೆ ಕೆಲವು ವರ್ಷಗಳಿಂದ ದೀಪೋತ್ಸವ ಹಾಗೂ ರಥೋತ್ಸವ ವೈಭವದಿಂದ ನಡೆಯುತ್ತಿದೆ. ಊರಿಗೆ ಊರೇ ಪಾಲ್ಗೊಳ್ಳುವ ಈ ಲಕ್ಷ ದೀಪೋತ್ಸವ ಅಕ್ಷರಶಃ ಒಂದು ಸಾರ್ವಜನಿಕ ಉತ್ಸವವಾಗಿದೆ. ನಗರದ ಬೀದಿಗಳ ಬದಿ ತಾತ್ಕಾಲಿಕ ಅಂಗಡಿಗಳ ಸಾಲಿನಿಂದ ತುಂಬಿವೆ. ಈ ಬಾರಿಯ ವಿಶೇಷ ಆಕರ್ಷಣೆ ಎಂಬಂತೆ ಕೋಟೇಶ್ವರ ಕೊಡಿ ಹಬ್ಬದಿಂದ ನೇರ ಇಲ್ಲಿಗೆ ಮನೋರಂಜನಾ ತೊಟ್ಟಿಲು ಸೇರ್ಪಡೆಯಾಗಿವೆ. ಸುಮಾರು 10 ಸಾವಿರ ಹೂವುಗಳಿಂದ ತಯಾರಿಸಲಾದ ಅಯ್ಯಪ್ಪನ ವಿಗ್ರಹ ಜನರನ್ನು ಆಕರ್ಷಿಸಿತು. ಮಧ್ಯಾಹ್ನದ ಅನ್ನಪ್ರಸಾದ ಭೋಜನಕ್ಕೂ ಭಕ್ತರು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next