Advertisement

Kundapura: ಬಾರ್‌ನಲ್ಲಿ ಗಲಾಟೆ; ಬಾಟಲಿಯಿಂದ ಇರಿತ ;ಇಬ್ಬರಿಗೆ ಗಾಯ; ಆರೋಪಿ ಬಂಧನ

08:05 PM Aug 15, 2024 | Team Udayavani |

ಕುಂದಾಪುರ: ಹಟ್ಟಿಯಂಗಡಿ ಗ್ರಾಮದ ಬಾರ್‌ವೊಂದರಲ್ಲಿ ಗಲಾಟೆ ನಡೆದು, ಬಳಿಕ ಬಾಟಲಿಯಲ್ಲಿ ಇರಿತಕ್ಕೊಳಗಾಗಿ ಇಬ್ಬರು ಗಾಯಗೊಂಡ ಘಟನೆ ಆ. 14ರ ರಾತ್ರಿ 8 ಗಂಟೆಯ ಸುಮಾರಿಗೆ ಸಂಭವಿಸಿದೆ.

Advertisement

ಕನ್ಯಾನ ಗ್ರಾಮದ ಅಭಿಷೇಕ್‌ ಹಾಗೂ ಸಂದೀಪ್‌ ಗಾಯಗೊಂಡವರು. ಹಲ್ಲೆಗೈದು ಪರಾರಿಯಾಗಿದ್ದ ಆರೋಪಿ ಪ್ರಸಾದ್‌ನನ್ನು ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪ್ರಸಾದ್‌ ಜೋರಾಗಿ ಫೋನ್‌ನಲ್ಲಿ ಮಾತನಾಡಿಕೊಂಡು ಬರುತ್ತಿದ್ದು, ಈ ಬಗ್ಗೆ ಕೇಳಿದ್ದಕ್ಕೆ ಅಭಿಷೇಕ್‌ ಅವರಿಗೆ ಬಿಯರ್‌ ಬಾಟಲಿಯಿಂದ ಹೊಟ್ಟೆಗೆ ಇರಿದಿದ್ದು, ಇದನ್ನು ತಪ್ಪಿಸಲು ಬಂದ ಸಂದೀಪ್‌ ಅವರ ಕಾಲಿಗೂ ಗಾಯವಾಗಿದೆ.

ತೀವ್ರತರವಾಗಿ ಗಾಯಗೊಂಡ ಅಭಿಷೇಕ್‌ ಹಾಗೂ ಸಂದೀಪ್‌ ಅವರನ್ನು ಬುಧವಾರ ರಾತ್ರಿಯೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುರುವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪ್ರಸಾದ್‌ ವಿರುದ್ಧ ಅಭಿಷೇಕ್‌ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next