Advertisement

Munirathna ʼರಾಜಕೀಯ ಬಂಧನʼ ಖಂಡನೀಯ: ಬಿ.ವೈ.ರಾಘವೇಂದ್ರ

07:46 PM Sep 15, 2024 | Team Udayavani |

ಚಿಕ್ಕಮಗಳೂರು:ಮಾಜಿ ಸಚಿವ ಮುನಿರತ್ನ ಅವರನ್ನು ರಾಜಕೀಯ ದುರುದ್ದೇಶಕ್ಕೆ ಬಂಧಿ ಸಿದ್ದರೆ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಮುನಿರತ್ನ ಮಾತನಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ಫೇಕ್‌ ಎಂಬ ಚರ್ಚೆಯೂ ನಡೆಯುತ್ತಿದೆ. ವಿಧಾನಸಭೆ ಮತ್ತು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಸೋಲಿನ ಹತಾಶೆಯಿಂದ ತಮ್ಮ ಮೇಲೆ ದ್ವೇಷ ಸಾ ಧಿಸಲಾಗುತ್ತಿದೆ ಎಂಬ ಮುನಿರತ್ನ ಹೇಳಿಕೆಯನ್ನು ಗಮನಿಸಿದ್ದೇನೆ. ಒಂದು ವೇಳೆ ಅವರ ಬಂಧನ ರಾಜಕೀಯ ದ್ವೇಷದಿಂದ ಕೂಡಿದ್ದರೆ ಸಹಿಸಲು ಸಾಧ್ಯವಿಲ್ಲ.

ಆಡಿಯೋದಲ್ಲಿರುವ ಪದಗಳನ್ನು ಯಾರೇ ಬಳಸಿದ್ದರೂ ಅದು ತಪ್ಪು. ಆದರೆ ಮುನಿರತ್ನ ಅವರೇ ಮಾತನಾಡಿದ್ದಾರೆಯೇ ಇಲ್ಲವೇ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಮುನಿರತ್ನ ಬಂಧನ ರಾಜಕೀಯ ದುರುದ್ದೇಶವೇ ಎನ್ನುವ ಸತ್ಯಾಸತ್ಯತೆ ಶೀಘ್ರವೇ ಹೊರಬರಲಿದೆ.

ಕಾಂಗ್ರೆಸ್‌ನವರು ಅಧಿಕಾರವಿದೆ ಎಂದು ದರ್ಪ ತೋರಿಸಿ, ರಾಜಕೀಯವಾಗಿ ತುಳಿಯಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next