Advertisement

Kasaragod: ಹಾರೆಯಿಂದ ಹೊಡೆದು ತಾಯಿಯ ಕೊಲೆ; ಬಂಧನ

07:38 PM Sep 18, 2024 | Team Udayavani |

ಕಾಸರಗೋಡು: ಹಾರೆಯಿಂದ ತಲೆಗೆ ಹೊಡೆದು ತಾಯಿಯನ್ನು ಕೊಲೆಗೈದು, ತಡೆಯಲು ಬಂದ ಸಹೋದರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುಳಿಯಾರು ಪೊವ್ವಲ್‌ ಬೆಂಚ್‌ ಕೋರ್ಟ್‌ ಸಮೀಪದ ಅಬ್ದುಲ್‌ ನಾಸರ್‌(42)ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ.

Advertisement

ಬಿ.ನಬೀಸಾ ಹತ್ಯೆಗೀಡಾದವರು ಹಾಗೂ ಅಬ್ದುಲ್‌ ಮಜೀದ್‌ ಗಾಯಾಳು.

ನಬೀಸಾ ಅವರ ಪತಿ ಪಳ್ಳಿಕ್ಕಾಲ್‌ ಅಬ್ದುಲ್ಲ ಕುಂಞಿ ಅವರು ಮಗಳ ಮನೆಗೆ ಹೋಗಿದ್ದರು. ಮನೆಯಲ್ಲಿ ನಬೀಸಾ ಮತ್ತು ಇಬ್ಬರು ಪುತ್ರರು ಮಾತ್ರವೇ ಇದ್ದರು. ಅಬ್ದುಲ್‌ ಮಜೀದ್‌ ನಿದ್ದೆ ಮಾಡಿದ್ದಾಗ ತಾಯಿ ಜೋರಾಗಿ ಕೂಗಿದ್ದು, ಎಚ್ಚರಗೊಂಡ ಅಬ್ದುಲ್‌ ಮಜೀದ್‌ ಬಂದು ನೋಡಿದಾಗ ನಬೀಸಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸಮೀಪದಲ್ಲಿ ಅಬ್ದುಲ್‌ ನಾಸರ್‌ ಹಾರೆ ಹಿಡಿದು ನಿಂತಿದ್ದ. ತಾಯಿಗೆ ಮತ್ತೂ ಹೊಡೆಯಲು ಮುಂದಾದ ಆರೋಪಿಯನ್ನು ಮಜೀದ್‌ ತಡೆಯಲೆತ್ನಿಸಿದ್ದು, ಆಗ ಆರೋಪಿಯು ಸಹೋದರನ ತಲೆಗೂ ಹೊಡೆದಿದ್ದಾನೆ.

ಬೊಬ್ಬೆ ಕೇಳಿ ಧಾವಿಸಿ ಬಂದ ನೆರೆಮನೆಯವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ನಬೀಸ ಮತ್ತು ಅಬ್ದುಲ್‌ ಮಜೀದ್‌ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ದಾರಿಮಧ್ಯೆ ನಬೀಸಾ ಕೊನೆಯುಸಿರೆಳೆದಿದ್ದಾರೆ. ಅಬ್ದುಲ್‌ ಮಜೀದ್‌ನನ್ನು ಚೆಂಗಳದ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next