Advertisement

ಕುಂದಾಪುರ: ಹೆಚ್ಚುತ್ತಿರುವ ನಗ-ನಗದು ಕಳವು

09:42 PM Feb 14, 2021 | Team Udayavani |

ಕುಂದಾಪುರ: ಕಳೆದೊಂದು ವಾರದಲ್ಲಿ ನಗರ ಸೇರಿದಂತೆ ಕುಂದಾಪುರ ಉಪ ವಿಭಾಗದಲ್ಲಿ 4 ಕಳ್ಳತನ ಪ್ರಕರಣಗಳು ನಡೆದಿವೆ. ಅದರಲ್ಲೂ 3 ಪ್ರಕರಣಗಳಲ್ಲಿ ನಗ- ನಗದು ಕಳವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಕಳೆದ ಫೆ.6ರಂದು ಶಾಸ್ತ್ರಿ ಸರ್ಕಲ್‌ ಬಳಿ  ಉಪನ್ಯಾಸಕಿಯೊಬ್ಬರ 40 ಸಾವಿರ ರೂ. ಕಳವಾಗಿತ್ತು. ಈ ಕೃತ್ಯದಲ್ಲಿ ಮಹಿಳಾ ಗ್ಯಾಂಗ್‌ ಕೈವಾಡದ ಶಂಕೆ ವ್ಯಕ್ತವಾಗಿತ್ತು. ಫೆ. 11ರಂದು  ಹೆಮ್ಮಾಡಿ ಸಮೀಪ ಬಸ್‌ನಲ್ಲಿ ಪ್ರಯಾಣಿಸು ತ್ತಿದ್ದ ವೃದ್ಧೆಯೊಬ್ಬರ 1 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳ್ಳತನವಾಗಿದೆ. ಇದು ಕೂಡ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಫೆ.13ರಂದು ಕುಂದಾಪುರದ ಹೊಸ ಬಸ್‌ ನಿಲ್ದಾಣ ಸಮೀಪದ ವಿದ್ಯಾ ಬುಕ್‌ ಹೌಸ್‌ ಬಳಿ ಪುಸ್ತಕ ಖರೀದಿಯ ಸೋಗಿನಲ್ಲಿ ಬಂದ ಸುಮಾರು 45 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಆ ಮಳಿಗೆಯ ಮಾಲಕರ ಕಾರಿನಲ್ಲಿದ್ದ 20 ಸಾವಿರ ರೂ.  ಕಳವುಗೈದಿದ್ದ.

ದೇಗುಲದ ಘಂಟೆ ಕಳವು :

ಅಂಪಾರು ಗ್ರಾಮದ ನುಕ್ಯಾಡಿ ಶ್ರೀ ಮಹಾಗಣಪತಿ ದೇವಸ್ಥಾನದ ಮುಖ್ಯದ್ವಾರದ ಮುಂಭಾಗದ ಸುತ್ತ ಅಳವಡಿಸಿರುವ ಅಂದಾಜು 1 ಟನ್‌ಗೂ ಮಿಕ್ಕಿದ ಸುಮಾರು 500ರಿಂದ 600ಕ್ಕೂ ಹೆಚ್ಚಿನ ಕಂಚಿನ ಘಂಟೆಗಳು, ಭಕ್ತರೊಬ್ಬರು ನೀಡಿದ ಸುಮಾರು 106 ಕೆ.ಜಿ. ತೂಕದ ಒಂದು ದೊಡ್ಡ ಘಂಟೆ ಕಳವಾಗಿದ್ದು, ಇದರ ಒಟ್ಟು ಮೌಲ್ಯ 11 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಕಳ್ಳರ ಪತ್ತೆಗೆ ಆಗ್ರಹ :

Advertisement

ಕುಂದಾಪುರ ಉಪ ವಿಭಾಗ ವ್ಯಾಪ್ತಿ ಯಲ್ಲಿ ಕಳೆದೊಂದು ವಾರದೊಳಗೆ 4 ಕಳ್ಳತನ ಪ್ರಕರಣಗಳು ನಡೆದಿದ್ದು, ಈವರೆಗೆ ಯಾವುದೇ ಪ್ರಕರಣದಲ್ಲಿಯೂ ಕಳ್ಳರ ಪತ್ತೆಯಾಗಿಲ್ಲ. ಹೀಗೇ ಬಿಟ್ಟರೆ ಇದು ಹೆಚ್ಚುವ ಆತಂಕ ಜನರಲ್ಲಿದ್ದು, ಶೀಘ್ರ ವಿಶೇಷ ಪೊಲೀಸ್‌ ತಂಡವನ್ನು ರಚಿಸಿ, ಕಳ್ಳರನ್ನು ಪತ್ತೆಹಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶೀಘ್ರ ವಿಶೇಷ ತಂಡ :

ಕಳೆದ ಕೆಲ ದಿನಗಳಿಂದ ಅಲ್ಲಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದು, ಈ ಬಗ್ಗೆ ಈಗಾಗಲೇ ಪ್ರಾಥಮಿಕ ಹಂತದ ತನಿಖೆಗಳು ನಡೆದಿವೆ. ಆದರೆ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ.

ಈ ಪ್ರಕರಣಗಳನ್ನು ಭೇದಿಸಲು ಶೀಘ್ರ ವಿಶೇಷ ಪೊಲೀಸರ ತಂಡವನ್ನು ರಚಿಸಲಾಗುವುದು ಎಂದು ಕುಂದಾಪುರ ಉಪ ವಿಭಾಗದ ಡಿವೈಎಸ್‌ಪಿ ಕೆ. ಶಂಕರ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next