Advertisement

ಕೋವಿಡ್ ಭೀತಿಯಿದ್ದರೂ ಸಂಪ್ರದಾಯದಂತೆ ನಡೆಯಲಿದೆ ಕುಂಭಮೇಳ

09:27 AM Nov 23, 2020 | keerthan |

ಡೆಹ್ರಾಡೂನ್: ಕೋವಿಡ್ 19 ಸೋಂಂಕು ಭೀತಿಯಿದ್ದರೂ ಈ ಬಾರಿಯ ಕುಂಭಮೇಳ ಸಂಪ್ರದಾಯದಂಯೆ ದೈವಿಕ ರೂಪದಲ್ಲೇ ನಡೆಯಲಿದೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.

Advertisement

ಕುಂಭಮೇಳ ತಯಾರಿಯ ಬಗ್ಗೆ ಎಬಿಎಪಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಬಗ್ಗೆ ಹೇಳಿದರು. 2021ರ ಜನವರಿ 14ರಂದು ಮುಂದಿನ ಕುಂಭಮೇಳ ನಡೆಯಲಿದೆ.

ಕುಂಭಮೇಳದ ವ್ಯಾಪ್ತಿಯು ಆ ಸಮಯದಲ್ಲಿ ರಾಜ್ಯದ ಕೋವಿಡ್ -19 ಸ್ಥಿತಿಯನ್ನು ಅವಲಂಬಿಸಿರುತ್ತದೆ. ಪರಿಸ್ಥಿತಿಗೆ ಅನುಗುಣವಾಗಿ ಎಬಿಎಪಿ ಮತ್ತು ಧಾರ್ಮಿಕ ಸಂಘಟನೆಗಳ ಸಲಹೆಗಳನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಭಕ್ತರು ಯಾವುದೇ ಅನಾನುಕೂಲತೆಯನ್ನು ಎದುರಿಸದಂತೆ ನೋಡಿಕೊಳ್ಳುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.

ಇದನ್ನೂ ಓದಿ:ಪೊಲೀಸ್‌ ತಿದ್ದುಪಡಿ ಕಾಯ್ದೆಗೆ ಅಂಕಿತ: ಆಕ್ಷೇಪಾರ್ಹ ಪೋಸ್ಟ್‌ಗೆ ಕನಿಷ್ಠ 3 ವರ್ಷ ಜೈಲು, ದಂಡ

ಕುಂಭಮೇಳದ ಕೆಲಸಗಳನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಸತತವಾಗಿ ಮೇಲ್ವಿಚಾರಣೆ ಮಾಡಲು ಇಲಾಖಾ ಕಾರ್ಯದರ್ಶಿಗಳಿಗೆ ನಿರ್ದೇಶಿಸಲಾಗಿದೆ. 15 ದಿನಗಳಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಲಾಗಿದೆ” ಎಂದು ಅವರು ಹೇಳಿದರು.

Advertisement

“ಕುಂಭಮೇಳಕ್ಕಾಗಿ ಒಂಬತ್ತು ಹೊಸ ಘಾಟ್ ಗಳು, ಎಂಟು ಸೇತುವೆಗಳು ಮತ್ತು ರಸ್ತೆಗಳ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಕುಡಿಯುವ ನೀರಿನ ಸೌಲಭ್ಯ, ಪಾರ್ಕಿಂಗ್ ಸೌಲಭ್ಯಗಳ ಕುರಿತಾಗಿ ಸತತವಾಗಿ ಕಾಮಗಾರಿಗಳು ನಡೆಯುತ್ತಿವೆ ಎಂದು ಕುಂಭಮೇಳ ಅಧಿಕಾರಿ ದೀಪಕ್ ರಾವತ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next