Advertisement

ಕ್ಷಮಾದಾನ ಅರ್ಜಿ ಸಲ್ಲಿಸಿದ ಕುಲಭೂಷಣ್‌ ಜಾಧವ್‌

03:45 AM Jun 23, 2017 | |

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿ ರುವ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲ ಭೂಷಣ್‌ ಜಾಧವ್‌ ಅವರು ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪಾಕ್‌ ಸೇನೆಯೇ ಮಾಹಿತಿ ನೀಡಿದೆ. 

Advertisement

“ಜಾಧವ್‌ ಅವರು ತಾವು ಬೇಹುಗಾರಿಕೆ, ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವುದನ್ನು ಒಪ್ಪಿ ಕೊಂಡಿದ್ದಾರೆ. ಅಲ್ಲದೆ, ತಮ್ಮಿಂದಾಗಿ ಆದ ಪ್ರಾಣಹಾನಿ, ಆಸ್ತಿ ಪಾಸ್ತಿ ಹಾನಿ ಬಗ್ಗೆಯೂ ಪಶ್ಚಾತ್ತಾಪ ಪಡುವುದಾಗಿ ಹೇಳಿ, ಕ್ಷಮಾದಾನ ನೀಡುವಂತೆ ಕೋರಿದ್ದಾರೆ’ ಎಂದಿದೆ ಸೇನೆ. ಕಾನೂನಿನ ಪ್ರಕಾರ, ಸೇನೆಯು ಜಾಧವ್‌ಗೆ ಕ್ಷಮೆ ನೀಡದಿದ್ದರೆ, ಪಾಕ್‌ ಅಧ್ಯಕ್ಷರ ಮೊರೆ ಹೋಗುವ ಅವಕಾಶ ಜಾಧವ್‌ಗಿದೆ.

Advertisement

Udayavani is now on Telegram. Click here to join our channel and stay updated with the latest news.

Next