Advertisement

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಪುನಾರಂಭ

06:40 AM Aug 21, 2018 | |

ಬೆಂಗಳೂರು: ಪ್ರವಾಹದಿಂದ ಕಳೆದ ಒಂದು ವಾರದಿಂದ ಸ್ಥಗಿತಗೊಂಡಿದ್ದ ಕರಾವಳಿ ಭಾಗಕ್ಕೆ ಬಸ್‌ ಸಂಚಾರ ಪುನಾರಂಭಗೊಂಡಿದೆ.

Advertisement

ನಿರಂತರ ಮಳೆಯಿಂದ ಗುಡ್ಡ ಮತ್ತು ಅಲ್ಲಲ್ಲಿ ಮಣ್ಣು ಕುಸಿತದಿಂದ ಬೆಂಗಳೂರು, ಮೈಸೂರು ಸುತ್ತಲಿನಿಂದ ಕರಾವಳಿಗೆ ತೆರಳುವ ಪ್ರೀಮಿಯಂ ಬಸ್‌ ಸೇವೆಗಳ ಸಂಚಾರ ಆ. 14ರಿಂದ ಸ್ಥಗಿತಗೊಂಡಿತ್ತು. ಈಗ ಚಾರ್ಮಾಡಿ ಘಾಟಿ ಮೂಲಕ ಸಂಚಾರ ಪುನಾರಂಭಗೊಂಡಿದೆ. ಆದರೆ, ಶಿರಾಡಿ ಘಾಟಿ ಮಾರ್ಗದಲ್ಲಿ ಇನ್ನೂ ಬಸ್‌ಗಳ ಸಂಚಾರ ಶುರುವಾಗಿಲ್ಲ. ಚಾರ್ಮಾಡಿ ಘಾಟಿ
ಮುಖಾಂತರ ಮಂಗಳೂರಿಗೆ ರಾಜಹಂಸ ಮತ್ತು ಸ್ಲಿàಪರ್‌ ಕೋಚ್‌ ಸೇರಿ 29 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಜತೆಗೆ ಕುದುರೆಮುಖ ಮಾರ್ಗವಾಗಿ ಕುಂದಾಪುರಕ್ಕೆ 2 ಐರಾವತ ಕ್ಲಬ್‌ ಕ್ಲಾಸ್‌ ಬಸ್‌,ಕಾಸರಗೋಡು ಹೊರತುಪಡಿಸಿ ಕೇರಳಕ್ಕೆ ಬಸ್‌ ಸಂಚಾರ ಶುರುವಾಗಿದೆ. ಮಡಿಕೇರಿ ಹಾಗೂ ಕುಶಾಲನಗರಕ್ಕೂ ಸೋಮವಾರ ಇಡೀ ದಿನದಲ್ಲಿ 19ಬಸ್‌ ಕಾರ್ಯಾಚರಣೆ ಮಾಡಿವೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next