Advertisement

Krishnapura: ಚರಂಡಿ ಕಾಮಗಾರಿ ವೇಳೆ ಕುಸಿದು ಬಿದ್ದ ಕಂಪೌಂಡ್‌,ಕಾರ್ಮಿಕ ಮೃತ್ಯು

06:44 PM Aug 30, 2023 | Team Udayavani |

ಸುರತ್ಕಲ್‌: ಇಲ್ಲಿನ ಕೃಷ್ಣಾಪುರ 6ನೇ ಬ್ಲಾಕ್‌ನಲ್ಲಿ ಮಳೆ ನೀರು ಹರಿಯುವ ಚರಂಡಿ ಕಾಮಗಾರಿಗಾಗಿ ಅಗೆಯುತ್ತಿದ್ದ ಸಂದರ್ಭ ಬದಿಯಲ್ಲಿದ್ದ ಕಂಪೌಂಡು ಕುಸಿದು ಬಿದ್ದ ಪರಿಣಾಮ ಓರ್ವ ಕಾರ್ಮಿಕ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.

Advertisement

ಬಜಪೆ ಕರಂಬಾರು ನಿವಾಸಿ ಹನೀಫ್‌(46)ಮೃತ ವ್ಯಕ್ತಿಯಾಗಿದ್ದಾರೆ.

ತತ್‌ಕ್ಷಣ ಇತರ ಕಾರ್ಮಿಕರು ಸೇರಿ ಕುಸಿದ ಕಂಪೌಂಡ್‌ ಅಡಿಯಲ್ಲಿ ಸಿಲುಕಿದ್ದ ಹನೀಫ್‌ನನ್ನು ಹೊರಗೆತ್ತಿ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next