Advertisement

ಜಾತಿ ಸಂತುಲನೆಗಾಗಿ ಕೋವಿಂದ್‌ ರಾಷ್ಟ್ರಪತಿಯಾದರು: ರಾಜಸ್ಥಾನ CM ಗೆಹಲೋಟ್‌ ವಿವಾದ

12:49 PM Apr 18, 2019 | Sathish malya |

ಜೈಪುರ : 2017ರ ಗುಜರಾತ್‌ ವಿಧಾನಸಭಾ ಚುನಾವಣೆಗೆ ಮುನ್ನ ಜಾತಿ ಸಂತುಲನೆಗಾಗಿ ರಾಮನಾಥ್‌ ಕೋವಿಂದ್‌ ಅವರನ್ನು ಭಾರತದ ರಾಷ್ಟ್ರಪತಿಯನ್ನಾಗಿ ಮಾಡಲಾಯಿತು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋಟ್‌ ಇಂದು ಬುಧವಾರ ಹೇಳಿರುವುದು ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.

Advertisement

“2017ರ ಗುಜರಾತ್‌ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ರಾಮ ನಾಥ್‌ ಕೋವಿಂದ್‌ ಅವರನ್ನು ದೇಶದ ರಾಷ್ಟ್ರಪತಿನ್ನಾಗಿ ಮಾಡಲಾಯಿತು ಎಂದು ಜನರು ಕೂಡ ಹೇಳುತ್ತಾರೆ. ನಾನೊಂದು ಲೇಖನವನ್ನು ಓದುತ್ತಿದ್ದೆ. ಅದರಲ್ಲಿ ಗುಜರಾತ್‌ನಲ್ಲಿ ತನಗೆ ಸರಕಾರ ರಚಿಸಲಾಗದು ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಭಯ ಇರುವಂತಿದೆ ಎಂದು ಹೇಳಲಾಗಿತ್ತು. ಆಗ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕೊಟ್ಟ ಸಲಹೆಯನ್ನು ಅನುಸರಿಸಿ ರಾಮ ನಾಥ್‌ ಕೋವಿಂದ್‌ ಅವರನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡಲು ತೀರ್ಮಾನಿಸಲಾಯಿತು’ ಎಂದು ಗೆಹಲೋಟ್‌ ಅವರು ಸುದ್ದಿ ಗೋಷ್ಠಿಯಲ್ಲಿ ಪತ್ರಕರ್ತರಿಗೆ ಹೇಳಿದರು.

ಕೋವಿಂದ್‌ ಅವರನ್ನು 2017ರ ಜುಲೈಯಲ್ಲಿ ದೇಶದ ರಾಷ್ಟ್ರಪತಿಯನ್ನಾಗಿ ಚುನಾಯಿಸಲಾಯಿತು ಮತ್ತು ಆ ವರ್ಷ ಡಿಸೆಂಬರ್‌ ನಲ್ಲಿ ಗುಜರಾತ್‌ ವಿಧಾನಸಭಾ ಚುನಾವಣೆಗಳು ನಡೆದವು.

‘ದೇಶದ ಜನರು ಹಿರಿಯ ಬಿಜೆಪಿ ನಾಯಕ ಲಾಲಕೃಷ್ಣ ಆಡ್ವಾಣಿ ಅವರು ದೇಶದ ರಾಷ್ಟ್ರಪತಿಯಾಗುವರೆಂದು ಭಾವಿಸಿದ್ದರು. ಆದರೆ ಬಿಜೆಪಿ ಅವರ ಹೆಸರನ್ನು ಕೈಬಿಟ್ಟಿತು. ರಾಮ ನಾಥ್‌ ಕೋವಿಂದ್‌ ಅವರನ್ನು ಅವರ ಜಾತಿಗಾಗಿ ದೇಶದ ರಾಷ್ಟ್ರಪತಿನ್ನಾಗಿ ಮಾಡಿತು. ಇದು ಬಿಜೆಪಿಯ ಆಂತರಿಕ ವಿಷಯವೇ ಆದರೂ ಆ ಬಗ್ಗೆ ನಾನು ಲೇಖನ ಓದಿರುವುದರಿಂದ ಪ್ರತಿಕ್ರಿಯಿಸುತ್ತಿದ್ದೇನೆ’ ಎಂದು ಗೆಹಲೋಟ್‌ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next