Advertisement

‘ಕೌಸಲ್ಯ ಸುಪ್ರಜಾ ರಾಮ’ನಾದ ಡಾರ್ಲಿಂಗ್ ಕೃಷ್ಣ: ಶಶಾಂಕ್ ನಿರ್ದೇಶನ

10:10 AM Oct 17, 2022 | Team Udayavani |

ಇತ್ತೀಚೆಗಷ್ಟೇ ಶಶಾಂಕ್‌ ನಿರ್ದೇಶನದಲ್ಲಿ ಡಾರ್ಲಿಂಗ್‌ ಕೃಷ್ಣ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾ ದಸರಾ ಹಬ್ಬದ ಸಂದರ್ಭದಲ್ಲಿ ಅದ್ಧೂರಿಯಾಗಿ ಸೆಟ್ಟೇರಿತ್ತು. ಇದೀಗ ಶಶಾಂಕ್‌ ಮತ್ತು ಡಾರ್ಲಿಂಗ್‌ ಕೃಷ್ಣ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಈ ಹೊಸ ಸಿನಿಮಾಕ್ಕೆ ಟೈಟಲ್‌ ಫಿಕ್ಸ್‌ ಆಗಿದೆ.

Advertisement

ಹೌದು, “ಶಶಾಂಕ್‌ ಸಿನೆಮಾಸ್‌’ ಮತ್ತು “ಕೌರವ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಕಥಾಹಂದರ ಹೊಂದಿರುವ ಈ ಹೊಸ ಸಿನಿಮಾಕ್ಕೆ, “ಕೌಸಲ್ಯ ಸುಪ್ರಜಾ ರಾಮ’ ಎಂದು ಟೈಟಲ್‌ ಇಡಲಾಗಿದೆ

ಇನ್ನು “ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಟೈಟಲ್‌ ಬಿಡುಗಡೆಯ ಬಳಿಕ ಮಾತನಾಡಿದ ನಿರ್ದೇಶಕ ಶಶಾಂಕ್‌, “ಇದೊಂದು ಕಂಪ್ಲೀಟ್‌ ಫ್ಯಾಮಿಲಿ ಕಥಾಹಂದರ ಹೊಂದಿರುವ ಸಿನಿಮಾ. ಬಹುತೇಕ ಎಲ್ಲ ಫ್ಯಾಮಿಲಿಗಳಲ್ಲೂ ಎದುರಿಸುವಂಥ ವಿಷಯವೊಂದನ್ನು ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಇಂಥದ್ದೊಂದು ವಿಷಯದ ಮೇಲೆ ಇಲ್ಲಿಯವರೆಗೆ ಯಾವ ಭಾಷೆಗಳಲ್ಲೂ

ಸಿನಿಮಾ ಬಂದಿಲ್ಲ. ಆ ವಿಷಯವನ್ನು ನಾವು ಈ ಸಿನಿಮಾದಲ್ಲಿ ಹೇಳುತ್ತಿದ್ದೇವೆ. ಒಂದಷ್ಟು ಎಮೋಶನ್ಸ್‌ ಮತ್ತು ಎಂಟರ್‌ ಟೈನ್ಮೆಂಟ್‌ ಎರಡೂ ಈ ಸಿನಿಮಾದಲ್ಲಿದೆ. ಫ್ಯಾಮಿಲಿ ಆಡಿಯನ್ಸ್‌ಗೆ ಖಂಡಿತಾ ಇಷ್ಟವಾಗುವಂಥ ಸಿನಿಮಾ ಇದಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಟೀಂ ಇಂಡಿಯಾಕ್ಕಿಂದು ಮೊದಲ ಅಭ್ಯಾಸ ಪಂದ್ಯ: ಟಾಸ್ ಗೆದ್ದ ಆಸ್ಟ್ರೇಲಿಯಾಕ್ಕಿಲ್ಲ ವಾರ್ನರ್ ಬಲ

Advertisement

ನಟ ಡಾರ್ಲಿಂಗ್‌ ಕೃಷ್ಣ ಅವರಿಗೂ “ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಮೇಲೆ ಸಾಕಷ್ಟು ನಿರಿಕ್ಷೆಯಿದೆ.”ಶಶಾಂಕ್‌ ಅವರು ಯಾವ ಥರದ ಸಿನಿಮಾ ಮಾಡ್ತೀರಾ? ಅಂಥ ಕೇಳಿದರು. ಆಗ ನನಗೋಸ್ಕರ ಕಥೆ ಮಾಡುವುದಕ್ಕಿಂತ ನೀವು ಮಾಡುವ ಕಥೆಗೆ, ನಾನು ಹೊಂದಾಣಿಕೆಯಾಗುವುದಾದರೆ, ಅದನ್ನೇ ಮಾಡೋಣ ಎಂದೆ. ಅದರಂತೆ ಅವರು ಹೇಳಿದ “ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಕಥೆಯ ಎಳೆ ತುಂಬ ಇಷ್ಟವಾಯಿತು. ಶಶಾಂಕ್‌ ಕನ್ನಡದಲ್ಲಿ ಹಲವು ಹೊಸಥರದ ಸಿನಿಮಾಗಳನ್ನು ಮಾಡಿದ ಅನುಭವಿ ನಿರ್ದೇಶಕ. ಅವರೊಂದಿಗೆ ಈ ಸಿನಿಮಾದಲ್ಲಿ ಕೆಲಸ ಮಾಡಲು ಖುಷಿಯಾಗುತ್ತಿದೆ. ಕನ್ನಡದ ಮಟ್ಟಿಗೆ ಇದೊಂದು ಅಪರೂಪ ಸಿನಿಮಾವಾಗಲಿದೆ’ ಎಂಬುದು ಡಾರ್ಲಿಂಗ್‌ ಕೃಷ್ಣ ಮಾತು.

ಇನ್ನು “ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಐದು ಹಾಡುಗಳಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಉಳಿದಂತೆ ಸಿನಿಮಾದ ನಾಯಕಿಯರು ಮತ್ತು ಇತರ ಕಲಾವಿದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಸದ್ಯ ಮುಹೂರ್ತವನ್ನು ಆಚರಿಸಿಕೊಂಡು, ಬಳಿಕ ಈಗ ಟೈಟಲ್‌ ಅನೌನ್ಸ್‌ ಮಾಡಿಕೊಂಡಿರುವ “ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಚಿತ್ರೀಕರಣವನ್ನು ಇದೇ ತಿಂಗಳಾಂತ್ಯಕ್ಕೆ ಶುರು ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. ಸುಮಾರು ಐವತ್ತರಿಂದ ಅರವತ್ತು ದಿನಗಳ ಕಾಲ “ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿರುವ ಚಿತ್ರತಂಡ, ಮೊದಲ ಹಂತದಲ್ಲಿ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next