Advertisement

Kottigehara: ಕಾಳಿಂಗ ಸರ್ಪ ಸೆರೆ

08:13 PM Oct 08, 2024 | Team Udayavani |

ಕೊಟ್ಟಿಗೆಹಾರ: ಬೆಟ್ಟಗೆರೆಯ ಸಮೀಪದ ಕಾಫಿ ತೋಟದ ಹತ್ತಿರದ ಮನೆಯ ಬಳಿಯಿದ್ದ ಕಾಳಿಂಗ ಸರ್ಪವನ್ನು ಅ.8ರ ಮಂಗಳವಾರ ಸೆರೆ ಹಿಡಿಯಲಾಯಿತು.

Advertisement

ಬೆಟ್ಟಗೆರೆಯ ಧರಣೇಂದ್ರ ಜೈನ್ ಎಂಬವರ ಮನೆಯ ಸಮೀಪ 12 ಅಡಿ ಉದ್ದದ ಕಾಳಿಂಗ ಸರ್ಪ ಮನೆಯ ಬಳಿ ಕಾಣಿಸಿಕೊಂಡು ಮನೆಯವರು ಭಯಭೀತರಾಗಿದ್ದರು. ಬಣಕಲ್ ಉರಗ ಪ್ರೇಮಿ ಮೊಹಮ್ಮದ್ ಆರೀಫ್ ಅವರಿಗೆ ಕರೆ ಮಾಡಿ ಕಾಳಿಂಗ ಸರ್ಪ ಇರುವ ಬಗ್ಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಆರೀಫ್ ಕಾಳಿಂಗ ಸರ್ಪವನ್ನು ಹರಸಾಹಸ ಪಟ್ಟು ಹಿಡಿದು ಚಾರ್ಮಾಡಿ ಘಾಟ್ ಸುರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಬಸವರಾಜ್, ಸಿಬ್ಬಂದಿ ಮೊಹಸಿನ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next