Advertisement

ಇನ್ನೂ ಸಿಕ್ಕಿಲ್ಲ  ಕೋಟೆಯಂಗಡಿ-ಕೋಡಿ ಬೆಟ್ಟು  ರಸ್ತೆಗೆ ಮುಕ್ತಿ

01:00 AM Feb 18, 2019 | Team Udayavani |

ಮಾಳ: ಮಾಳ ಗ್ರಾಮದ ವ್ಯಾಪ್ತಿಗೆ  ಸೇರಿದ ಜಿ.ಪಂ. ಅಧೀನಕ್ಕೆ  ಒಳಪಟ್ಟ ಸುಮಾರು 1.5 ಕಿ.ಮೀ ರಸ್ತೆ ಹದಗೆಟ್ಟಿದ್ದು  ನಿತ್ಯ ಪ್ರಯಾಣಿಸುವ  ಪ್ರಯಾಣಿಕರು ಪರದಾಡುವಂತಾಗಿದೆ.

Advertisement

ಗ್ರಾಮದ  ಮುಖ್ಯ ಕೂಡು ರಸ್ತೆ ಇದಾಗಿದ್ದು, ಕುದುರೆಮುಖ ಹೆದ್ದಾರಿಯನ್ನು  ಸಂಪರ್ಕಿಸುತ್ತದೆ . ಚೌಕಿಯಂಗಡಿ, ಪೂಂಜಾಜೆ, ನೂರಾಳ್‌ಬೆಟ್ಟು , ಹೊಸ್ಮಾರಿಗೆ ಸಂಪರ್ಕಿಸುವ ಹತ್ತಿರದ ಒಳದಾರಿಯೂ ಆಗಿದೆ.  ಕಾರ್ಕಳ, ಮಾಳ, ಪೂಂಜಾಜೆಗೆ ನಿತ್ಯ ಬಸ್‌ ಸಂಪರ್ಕ ಇದ್ದರೂ ರಸ್ತೆ ಮಾತ್ರ  ತೀರ ಹದಗೆಟ್ಟ ಸ್ಥಿತಿಯಲ್ಲೇ ಇದೆ.

ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ನಿವಾಸಿ ಕಿರಣ್‌ ಕುಮಾರ್‌ ಹೆಗೆª  ಅವರ ನೇತೃತ್ವದಲ್ಲಿ , ಸಾರ್ವಜನಿಕರ ದೊಡ್ಡ ಸಂಖ್ಯೆಯ ಸಹಿಯುಳ್ಳ ಮನವಿಗಳನ್ನು  ಈ  ಹಿಂದೆ  ಜನಪ್ರತಿನಿಧಿಗಳು  ಮತ್ತು ಸಂಬಂಧಿಸಿದ ಇಲಾಖೆಗಳಿಗೆ  ಹಲವು ಬಾರಿ  ಸಲ್ಲಿಸಲಾಗಿದೆ. ಆದರೂ ಯಾವುದೇ ರೀತಿಯ ಪ್ರಯೊಜನವಾಗಿಲ್ಲ.  

ಮಳೆಗಾಲ  ಆರಂಭಗೊಂಡರೆ ರಸ್ತೆ‌ ಸಂಪೂರ್ಣ ಹದಗೆಟ್ಟು, ಮೊಣಕಾಲಿನವರೆಗೂ ಕೆಸರು ತುಂಬಿದ ಗದ್ದೆೆಯಂತಾಗುತ್ತದೆ, ಏನೂ ಕಾಣಿಸದ ಪರಿಸ್ಥಿತಿ ರೂಪುಗೊಳ್ಳುತ್ತದೆ. ಈ ರಸ್ತೆಗೆ  3 ವರ್ಷಗಳ ಹಿಂದೆ ಅರ್ಧ ಡಾಮರೀಕರಣ ಮಾಡಲಾಗಿದ್ದು,  ಸದ್ಯದ ಸ್ಥಿತಿಯಲ್ಲಿ ಅದೂ ಕಿತ್ತು ಬಂದು ಗುಂಡಿಗಳಾಗುತ್ತಿವೆ.  ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು ಶೀಘ್ರ ಸ್ಪಂದಿಸಿದಲ್ಲಿ ಹಲವು ವರ್ಷಗಳ ಜನರ ಕಷ್ಟ ಬಗೆಹರಿಯಬಹುದೆಂಬುದು ಇಲ್ಲಿನ ಜನರ‌ ಆಶಯ.

ಶೀಘ್ರ  ದುರಸ್ತಿ­­
ಈ ಬಗ್ಗೆ ಮನವಿಯನ್ನು ಕಳಿಸಿದ್ದು ಶೀಘ್ರವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ  ಆನುಕೂಲ ಮಾಡಿಕೊಡಲಾಗುವುದು.
– ಉದಯ್‌ ಎಸ್‌. ಕೋಟ್ಯಾನ್‌, ಜಿಲ್ಲಾ  ಪಂಚಾಯತ್‌ ಸದಸ್ಯರು

Advertisement

ಸ್ಪಂದನೆ ಇಲ್ಲ
ಸತತ 3 ವರ್ಷಗಳಿಂದ ಈ ರಸ್ತೆಯ ದುರಸ್ತಿಗಾಗಿ ಹೋರಾಡುತ್ತಾ ಬಂದಿದ್ದು ಇದುವರೆಗೂ ಯಾವುದೆ ಸ್ಪಂದನೆ ಸಿಕ್ಕಿಲ್ಲ. ಅಲ್ಲದೆ ಈಗಾಗಲೆ ಅರ್ಧ ಆಗಿರುವ ಕಾಮಗಾರಿಯು ಕಿತ್ತು ಹೋಗಿದೆ.
– ಕಿರಣ್‌ ಹೆಗ್ಡೆ, ಸ್ಥಳೀಯರು ಮಾಳ‌

–  ಪ್ರಶಾಂತ್‌ ಮುಡಾರು

Advertisement

Udayavani is now on Telegram. Click here to join our channel and stay updated with the latest news.

Next