Advertisement

ಕೊರಟಗೆರೆ:ಪುಟ್ಟೇಶ್ವರ ಸ್ವಾಮಿ ಮಠದಲ್ಲಿ ಹೈಡ್ರಾಮಾ; ಪೀಠಾಧಿಪತಿಯ ಪಟ್ಟಾಭಿಷೇಕ

12:35 PM Jun 11, 2022 | Team Udayavani |

ಕೊರಟಗೆರೆ : ತಾಲೂಕಿನ ಹೊಳವನಹಳ್ಳಿ ಹೊಬಳಿಯ ಸೋಂಪುರ ಗ್ರಾಮದ ಶ್ರೀ ಪುಟ್ಟೇಶ್ವರ ಸ್ವಾಮಿ ವಿರಕ್ತ ಮಠದ ಅಧಿಪತ್ಯಕ್ಕೆ ಮಠದ ಟಸ್ಟ್ ಭಕ್ತಾಧಿಗಳು, ಗ್ರಾಮಸ್ಥರು ಮತ್ತು ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದ ನಡುವೆ ಹೈಡ್ರಾಮಾ ನಡೆದ ಘಟನೆ ನಡೆದಿದೆ.

Advertisement

ತಾಲೂಕಿನ ಸೋಂಪುರದ ಪುಟ್ಟೇಶ್ವರ ಸ್ವಾಮಿಯ ವಿರಕ್ತ ಮಠದ (ದೊಡ್ಡ ಮಠ)ವನ್ನು ಹಲವು ವರ್ಷಗಳ ಹಿಂದೆ ಯಾರೂ ದಾನಿಗಳು 20 ಎಕರೆ ಭೂಮಿಯನ್ನು ಧಾನ ನೀಡಿ ಸ್ಥಾಪಿಸಿದ್ದರು. ಇಲ್ಲಿ ಸ್ಥಳೀಯ ಭಕ್ತರು ಚಂದ ವಸೂಲು ಮಾಡಿ ಪುಟ್ಟೇಶ್ವರ ದೇವಾಲಯದ ಹಳೆಯ ದೇವಾಲಯವನ್ನು ಕಟ್ಟಡವನ್ನು ಮತ್ತೆ ಹೊಸದಾಗಿ ಕಟ್ಟಿದರು, ಇಲ್ಲಿಗೆ ಪೂಜಾರಿಕಿಗೆ ಬಂದ್ದಿದ ಸ್ವಾಮೀಜಿ ಹಣ ಪಡೆದು ಅವರಿಗೆ ಹಕ್ಕಿಲ್ಲದ್ದಿದರೂ ಮುರಘಮಠಕ್ಕೆ ವಾರಸತ್ವನ್ನು ಪತ್ರದಲ್ಲಿ ನೀಡಿದ್ದಾರೆ ಎಂದು ಆ ಮಠದವರು ಹೇಳಿಕೊಂಡು ತಮಗೆ ಅನುಕೂಲಕರ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಮಠದ ಆಸ್ತಿ ಕಬಳಿಸಲು ಹನ್ನಾರ ನಡೆಸಿದ್ದಾರೆ ಎಂದು ಗ್ರಾಮಸ್ಥರು, ಭಕ್ತಾದಿಗಳು ಆರೋಪಿಸಿದ್ದಾರೆ.

ನಡೆದೇ ಹೋಯ್ತು ಪಟ್ಟಾಭಿಷೇಕ
ಜೂನ್ 10  ಶುಕ್ರವಾರ ಸೋಂಪುರ ದೊಡ್ಡಮಠವನ್ನು ಮುರಘಾ ಮಠದ ಶಾಖಾ ಮಠವನ್ನಾಗಿ ಮಾಡಿಕೊಳ್ಳಲು ಮತ್ತು ನೂತನ ಸ್ವಾಮೀಜಿಯನ್ನು ನೇಮಿಸಲು ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿಗಳು ಚಿತ್ರದುರ್ಗದಿಂದ ಬೆಳಗ್ಗೆ 11  ಗಂಟೆಗೆ ಬಗಿ ಪೊಲೀಸ್ ವ್ಯವಸ್ಥೆಯೊಂದಿಗೆ ಆಗಮಿಸಿದರು, ಸ್ವಾಮೀಜಿಗೂ ಸ್ವಲ್ಪ ಮುಂಚಿತವಾಗಿ ಮಠದ ನೂತನ ಪೀಠಾಧ್ಯಕ್ಷರಾಗಲು ಬಂದ ಬಸವಕಿರಣ ಸ್ವಾಮಿಗಳು ಹಾಗೂ ಮುರುಘಾ ಮಠದ ಕೆಲ ಬೆಂಬಲಿಗರು ಮಠಕ್ಕೆ ಬಂದ್ದಿದರು. ಅಲ್ಲಿಗೆ ಬಂದ ನೂರಾರು ಭಕ್ತರು ಸ್ವಾಮಿಜಿಯವರನ್ನು ಪೀಠಾರೋಹಣ ಕಾರ್ಯ ನಿಲ್ಲಿಸುವಂತೆ ಕೋರಿದರೂ ಪ್ರಯೋಜನವಾಗದೇ ಇದ್ದಾಗ ಕೂಗಾಡಿದರು. ಪೊಲೀಸರು ಅವರನ್ನು ಹೊರಹಾಕಿದರು.

ಈ ನಡುವೆ ಶಿವಮೂರ್ತಿ ಮುರುಘಾ ಶರಣ ಶ್ರೀಗಳು ತರಾತುರಿಯಲ್ಲಿ ಬಸವಕಿರಣ ಸ್ವಾಮಿಜಿಗಳಿಗೆ ಪೀಠಾಧಿಪತಿಯಾಗಿ ಪಟ್ಟಾಭಿಷೇಕ ಮಾಡಿದರು ಇದಕ್ಕೆ ಇಬ್ಬರು ಸ್ವಾಮಿಜಿಗಳು ಸಾಕ್ಷಿಯಾಗಿದ್ದರು, ಅಲ್ಲಿಯವರಿಗೂ ಬನ್ನಿ ಮಾತನಾಡೋಣ ಎನ್ನುತ್ತಿದ್ದ ಶಿವಮೂರ್ತಿ ಶ್ರೀಗಳು ಕಾರ್ಯಕ್ರಮ ಮುಗಿದ ಮೇಲೆ ಚಿತ್ರದುರ್ಗಕ್ಕೆ ಬನ್ನಿ ಎಂದು ಹೇಳಿ ಪೋಲೀಸ್ ಬಂದೋಬಸ್ತ್ ನಡುವೆ ಮರಳಿದರು. ನಂತರ ನೂತನ ಸ್ವಾಮಿಜಿ ಮತ್ತು ಭಕ್ತರ ಮುಂದೆ ಪಂಚಪೀಠ ಮತ್ತು ಬಸವತತ್ವದ ವಾದ ವಿವಾದಗಳು ನಡೆದವು.

ಪೊಲೀಸರ ಹರ ಸಾಹಸ

Advertisement

ಈ ಘಟನೆಯಲ್ಲಿ ಮಧುಗಿರಿ ಡಿವೈಎಸ್‌ಬಿ ರಾಮಕೃಷ್ಣ ಮತ್ತು ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರರ ಪೊಲೀಸ್ ತಂಡವು ಭಕ್ತರನ್ನು ತಡೆಯಲು ಹರ ಸಾಹಸ ಪಟ್ಟಿತು. ನೂಕು ತಳ್ಳಾಟದ ಮದ್ಯೆ ಜನರನ್ನು ಸಮಾಧಾನ ಪಡಿಸಲು ಸಾಕಷ್ಟು ಶ್ರಮವಹಿಸಿ ಭಕ್ತರ ಆಕ್ರೋಶ ತಡೆಯಲು ಶಕ್ತಿ ಮೀರಿ ಪ್ರಯತ್ನಿಸಿದರು.

ಸೋಂಪುರ ದೊಡ್ಡಮಠವು ನೂರಾರು ವರ್ಷಗಳಿಂದ ಮುರಘರಾಜೇಂದ್ರ ಮಠದ ಆಸ್ತಿಯಾಗಿದೆ, ಅದಕ್ಕೆ ನಮ್ಮ ಹತ್ತಿರ ದಾಖಲೆಗಳಿವೆ ಎಲ್ಲರೂ ಒಟ್ಟಾಗಿ ಬಂದರೆ ನಡೆಸಿಕೊಂಡು ಹೋಗಬಹುದು, ಕಾನೂನಿಗೆ ಎಲ್ಲರೂತಲೆ ಬಾಗಬೇಕು-ಶಿವಮೂರ್ತಿ ಮುರುಘಾ ಶರಣ ಶ್ರೀಗಳು.

ಹಲವು ವರ್ಷಗಳ ಹಿಂದೆ ಪುಟ್ಟೇಶ್ವರ ಸ್ವಾಮಿಗೆ ಭೂಮಿ ದಾನ ಮಾಡಿದ ಭಕ್ತರ ಜಾಗವನ್ನು ಮಠವನ್ನು,ಪೂಜಾರಿಕಗೆ ಬಂದವರಿಂದ ಹಣ ನೀಡಿ ಪತ್ರ ಬರೆಸಿಕೊಂಡು ಸುಳ್ಳು ದಾಖಲೇ ಸೃಷ್ಟಿಸಿಕೊಂಡದ್ದಾರೆ, ತಮ್ಮ ರಾಜಕೀಯ, ಪೋಲೀಸ್ ಬಲ ಬಳಸಿ ಬಂದ ಆಸ್ತಿಯನ್ನು ಕಬಳಿಸಲು ಮರುಘ ಮಠವು ಪ್ರಯತ್ನಿಸುತ್ತಿದೆ, ನಾವು ಕಾನೂನು ಹೋರಾಟ ಮಾಡುತ್ತೇವೆ, ಸತ್ಯ ನಮ್ಮ ಕಡೆ ಇದೆ.- ತ್ರಿಯಂಭಕ ಆರಾಧ್ಯ ಭಕ್ತರು

ಕಾರ್ಯಕ್ರಮದಲ್ಲಿ ನಾಗೇಂದ್ರ ಸ್ವಾಮಿಗಳು ಉಪಸ್ಥಿತರಿದ್ದರು. ಶ್ರೀ ಪುಟ್ಟೇಶ್ವರ ಸ್ವಾಮಿ ವಿರುಕ್ತ ಮಠದ ಭಕ್ತಾದಿಗಳಾದ ಪುಟೇಶ್ವರ ಸ್ವಾಮಿ ಟ್ರಸ್ಟ್ ಅಧ್ಯಕ್ಷರಾದ ದಿನೇಶ್, ಕಾರ್ಯದರ್ಶಿ ಶಿವರುದ್ರಯ್ಯ, ಪರ್ವತಯ್ಯ, ಹೆಚ್.ಎಂ.ರುದ್ರಪ್ರಸಾದ್, ತ್ರಯಾಂಬಕ ಆರಾಧ್ಯ, ವೀರಯ್ಯ, ಉಮಾಶಂಕರ್, ಪುಟ್ಟರಾಜು, ವಿಜಯಶಂಕರ್, ಜಿ.ಎಂ.ಶಿವಾನಂದ್ , ಮಲ್ಲೇಶ್, ಹುಚ್ಚಣ್ಣ ಸೇರಿದಂತೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next