Advertisement

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

09:05 AM Apr 25, 2024 | Team Udayavani |

ಕೋಲ್ಕತಾ: ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ನ 17ನೇ ಅಧ್ಯಕ್ಷರಾಗಿ ಸ್ವಾಮಿ ಗೌತಮಾ ನಂದಜೀ ಮಹಾರಾಜ್‌(95) ಅವರು ಆಯ್ಕೆಯಾಗಿದ್ದಾರೆ.

Advertisement

ಪಶ್ಚಿಮ ಬಂಗಾಲದ ಬೇಲೂರು ಮಠದಲ್ಲಿ ಬುಧ ವಾರ ನಡೆದ ಮಠದ ಆಡಳಿತ ಮಂಡಳಿ ಹಾಗೂ ಮಠಾಧೀ ಶರ ಸಭೆಯಲ್ಲಿ ಬೆಂಗಳೂರಿನವರೇ ಆದ ಗೌತಮಾನಂದಜೀ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಹಿಂದಿನ ಅಧ್ಯಕ್ಷರಾದ ಸ್ವಾಮಿ ಸ್ಮರಣಾನಂದ ಮಹಾರಾಜ್‌ ನಿಧನ ಹೊಂದಿದ ಹಿನ್ನೆಲೆಯಲ್ಲಿ, ಈ ಆಯ್ಕೆ ನಡೆದಿದೆ. 1929 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ಇವರು, 2017ರಲ್ಲಿ ಮಿಷನ್‌ನ ಉಪಾಧ್ಯಕ್ಷರಾಗಿದ್ದರು. ಅವರಿಗೆ ಪ್ರಧಾನಿ ಮೋದಿ ಸೇರಿ ಹಲವರು ಶುಭಾಶಯ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next