Advertisement

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

01:43 AM Apr 20, 2024 | Team Udayavani |

ಉಡುಪಿ: ಉಡುಪಿ ಕಿದಿಯೂರು ಹೊಟೇಲಿನ ಪ್ರಾಯೋಜಕತ್ವ, ಪರ್ಯಾಯ ಪುತ್ತಿಗೆ ಶ್ರೀಗಳ ಆಶೀರ್ವಾದದಲ್ಲಿ ಹನುಮಜ್ಜಯಂತಿಯ ಪ್ರಯುಕ್ತ ಎ. 19ರಿಂದ 5 ದಿನಗಳ ಕಾಲ ಸಂಜೆ 6ರಿಂದ 7ರ ವರೆಗೆ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಿದ್ವಾನ್‌ ಶ್ರೀಹರೀ ವಾಳ್ವೆಕರ್‌ ಅವರಿಂದ ಪ್ರಸ್ತುತಗೊಳ್ಳುವ ಸುಂದರಕಾಂಡ ಪ್ರವಚನಕ್ಕೆ ಚಾಲನೆ ನೀಡಲಾಯಿತು.

Advertisement

ಪುತ್ತಿಗೆ ಮಠದ ಹಿರಿಯ ಯತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರವಚನಕಾರ ವಿದ್ವಾನ್‌ ಶ್ರೀಹರೀ ವಾಳ್ವೆಕರ್‌, ಕಿದಿಯೂರು ಹೊಟೇಲಿನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ಜಿತೇಶ್‌ ಬಿ. ಕಿದಿಯೂರು, ಎಚ್‌. ಟಿ. ಕಿದಿಯೂರು, ಮಧುಸೂದನ್‌ ಪೂಜಾರಿ ಕೆಮ್ಮಣ್ಣು, ವಿಲಾಸ್‌ ಕುಮಾರ್‌ ಜೈನ್‌, ಪುತ್ತಿಗೆ ಮಠದ ಸಾಂಸ್ಕೃತಿಕ ಕಾರ್ಯಕ್ರಮದ ಮೇಲ್ವಿಚಾರಕ ರಮೇಶ್‌ ಆಚಾರ್ಯ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next