Advertisement

ತ್ಯಾಜ್ಯ ಮಣ್ಣು ತುಂಬಿಸಿ ಮರಳು ಸಂಗ್ರಹಕ್ಕೆ ಹುನ್ನಾರ?

11:36 AM Apr 30, 2018 | |

ಕೂಳೂರು : ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಕೂಳೂರು ಪಡುಕೋಡಿ, ಬಂಗ್ರ ಕೂಳೂರು ಪ್ರದೇಶದಲ್ಲಿ ಫ‌ಲ್ಗುಣಿ ನದಿಗೆ ತ್ಯಾಜ್ಯ ಮಣ್ಣು ತುಂಬಿ ಅಲ್ಲಲ್ಲಿ ಒತ್ತುವರಿ, ಅತಿ ಕ್ರಮ ಮಾಡಲಾಗುತ್ತಿದೆ. ಒಂದೆಡೆ ನದಿ ದಂಡೆಯನ್ನೇ ನುಂಗಲಾಗುತ್ತಿದ್ದರೆ, ಇನ್ನೊಂದೆಡೆ ನದಿ ನೀರಿಗೆ ಮಣ್ಣು ಹಾಕಿ ವಿಸ್ತಾರ ಮಾಡಲಾಗುತ್ತಿದೆ.

Advertisement

ದಿನಕ್ಕೆ ನೂರಾರು ಲಾರಿಗಳು ಸರತಿ ಸಾಲಿನಲ್ಲಿ ಆಗಮಿಸಿ ನದಿ ದಂಡೆಯ ಉದ್ದಕ್ಕೂ ಮಣ್ಣು ತುಂಬಿಸಿ ಒತ್ತುವರಿ ಮಾಡಲಾಗುತ್ತಿದೆ. ಇದರಲ್ಲಿ ಪ್ಲಾಸ್ಟಿಕ್‌ನಿಂದ ಹಿಡಿದು ಹಳೆ ಕಟ್ಟಡ ಕೆಡವಿದ ಸಾಮಾನುಗಳು, ಗಾಜಿನ ಚೂರುಗಳು ರಾಶಿ ರಾಶಿಯಾಗಿ ನದಿ ಒಡಲು ಸೇರುತ್ತಿವೆ. ಇನ್ನೊಂದೆಡೆ ನದಿಯ ದಡದ ಉದ್ದಕ್ಕೂ ಇದ್ದ ಕಾಂಡ್ಲ ಗಿಡಗಳೂ ಮಣ್ಣು ರಾಶಿಯನ್ನು ಸೇರಿ ಮರೆಯಾಗುತ್ತಿವೆ. ಜನವರಿಯಲ್ಲಿ ಜಿಲ್ಲಾಧಿಕಾರಿಯವರಿಗೆ ದೂರುನೀಡಲಾಗಿದೆ. ಜಿಲ್ಲಾ ಧಿಕಾರಿ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ತತ್‌ಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಭಾಗದಲ್ಲಿ ಈ ಹಿಂದೆ ಹೊಗೆ ತೆಗೆಯಲು ಯಾವುದೇ ವ್ಯವಸ್ಥೆ ಇರಲಿಲ್ಲ. ತಣ್ಣೀರುಬಾವಿ ಪ್ರದೇಶದಲ್ಲಿ ದಕ್ಕೆ ನಿರ್ಮಿಸಿ ಮರಳು ತೆಗೆಯಲು ಅನುಮತಿ ನೀಡಲಾಗಿತ್ತು. ಆದರೆ ಇದೀಗ ಪಡುಕೋಡಿ ಬಳಿಯೂ ಹೊಗೆ ತೆಗೆಯುವ ಕಾರ್ಯಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ಈ ಭಾಗದಲ್ಲಿಯೂ ನದಿ ದಂಡೆಯನ್ನು ಮಣ್ಣು ಹಾಕುವ ಮೂಲಕ ವಾಹನ ಸಲೀಸಾಗಿ ಓಡಾಡಲು, ಮರಳು ರಾಶಿ ಹಾಕಲು ನದಿಯನ್ನೇ ಬಳಸಿಕೊಳ್ಳಲಾಗುತ್ತಿದೆ. 

ಹೆದ್ದಾರಿಯಲ್ಲೂ ಅನಧಿಕೃತ ದಿಢೀರ್‌ ತಿರುವು ನಿರ್ಮಾಣ!
ಈ ಪಡುಕೋಡಿ ಬಂಗ್ರ ಕೂಳೂರು ಸಾಗಲು ಸರಿಯಾದ ರಸ್ತೆ ಇರಲಿಲ್ಲ. ಇದೀಗ ರಸ್ತೆ ಕಾಂಕ್ರೀಟ್‌ ಕಾಮಗಾರಿ ಜತೆಗೆ ವಿಸ್ತರಣೆಯೂ ಆಗಿದೆ. ಆದರೆ ಬೃಹತ್‌ ವಾಹನಗಳು ತಿರುವು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಯಾವುದೇ ಅನುಮತಿ ಪಡೆಯದೆ ಇದೀಗ ಹೆದ್ದಾರಿಯನ್ನು ಕೂಳೂರು ಮೇಲ್ಸೇತುವೆ ಬಳಿ ತುಂಡರಿಸಿ ಅಪಾಯಕಾರಿ ತಿರುವು ನಿರ್ಮಿಸಲಾಗಿದೆ. ಸಮೀಪವೇ ಶಾಲೆ, ಬಸ್‌ ನಿಲ್ದಾಣವಿರುವುದರಿಂದ ಜನನಿ ಬಿಡ ಪ್ರದೇಶವಾಗಿದೆ. ಇದರಿಂದ ಈ ಪ್ರದೇಶ ಅಪಘಾತವಲಯವಾಗುವ ಸಾಧ್ಯತೆಯಿದೆ.

ಚುನಾವಣೆ ಬಳಿಕ ಕ್ರಮ
ಕೂಳೂರು ಸಮೀಪ ಫ‌ಲ್ಗುಣಿ ನದಿಗೆ ಮಣ್ಣು ತುಂಬಿಸುವ ಬಗ್ಗೆ ಮಾಹಿತಿ ಬಂದಿದೆ. ಚುನಾವಣಾ ಕಾರ್ಯ ಒತ್ತಡವಿರುವುದರಿಂದ ಮುಗಿದ ಬಳಿಕ ಸಿಆರ್‌ ಝಡ್‌ ಟಾಸ್ಕ್ ಸಮಿತಿಗೆ ವರದಿ ನೀಡಲಾಗುವುದು. ಮಹಾನಗರ ಪಾಲಿಕೆಯೂ ಅತಿಕ್ರಮಣ ವಾಗಿದ್ದರೆ ತೆರವುಗೊಳಿಸುವ ಅಧಿಕಾರ ಹೊಂದಿದೆ.
– ಮಹೇಶ್‌,
ಮೀನುಗಾರಿಕಾ ಉಪನಿರ್ದೇಶಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next