Advertisement

ಅಕ್ರಮ ಒತ್ತುವರಿಗೆ ಬಲಿಯಾದ ಕೊಂಗಳಕೆರೆ

09:22 PM May 30, 2019 | Lakshmi GovindaRaj |

ಕೊಳ್ಳೇಗಾಲ: ಅಂರ್ತಜಲ ಹೆಚ್ಚಿಸುವ ಪಟ್ಟಣದ ಕೊಂಗಳಕೆರೆ ಸ್ಥಳ ಒಂದಲ್ಲಾ ಒಂದು ರೀತಿಯಲ್ಲಿ ಅಕ್ರಮ ಒತ್ತುವರಿಗೆ ಸಿಲುಕಿ ಸ್ಥಳ ಅನ್ಯರ ಪಾಲು ಆಗುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯéತನವೇ ಕಾರಣವಾಗಿದೆ.

Advertisement

ಇತ್ತೀಚೆಗಷ್ಟೇ “ಉದಯವಾಣಿ’ ಪಟ್ಟಣದ ಕೊಂಗಳಕೆರೆ ಅಕ್ರಮ ಒತ್ತುವರಿಗೆ ಸಿಲುಕಿ ಕೆರೆ ಸಂಪೂರ್ಣ ನಾಶವಾಗುತ್ತಿದೆ ಎಂದು ವಿಶೇಷ ವರದಿ ಮಾಡಲಾಗಿತ್ತು. ಆದರೆ ವರದಿ ಆಧರಿಸಿಕೊಂಡು ಎಚ್ಚೆತ್ತುಕೊಳ್ಳಬೇಕಾಗಿದ್ದ ಕಬಿನಿ ನಾಲಾ ವಿಭಾಗದ ಅಧಿಕಾರಿಗಳು ಕೆರೆಯತ್ತ ಗಮನ ಹರಿಸದೆ ಇರುವುದು ಈಗ ಆಟೋಚಾಲಕರು ಒತ್ತುವರಿ ಮಾಡಿಕೊಂಡು ಆಟೋ ನಿಲ್ದಾಣಕ್ಕೆ ಮುಂದಾಗಿದ್ದಾರೆ.

ಆಟೋ ನಿಲ್ದಾಣಕ್ಕೆ ಒತ್ತುವರಿ: ಪಟ್ಟಣದ ಅಚಾಳ್‌ ಯಾತ್ರಿ ನಿವಾಸದ ಪಕ್ಕದಲ್ಲಿರುವ 150 ಚದುರವಿರುವ ಕೆರೆಗೆ ಇಟ್ಟಿಗೆ ಮತ್ತು ಹಳೆಯ ಮಣ್ಣನ್ನು ಸುರಿದು ಕೆರೆಯನ್ನು ಮುಚ್ಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಆಟೋ ಚಾಲಕರು ನಿಲ್ದಾಣವೊಂದನ್ನು ನಿರ್ಮಿಸಿಕೊಳ್ಳುವ ಸಲುವಾಗಿ ಹಳೆಯ ಮಣ್ಣುಗಳಿಂದ ಕೆರೆ ಮುಚ್ಚಿ ನಿಲ್ದಾಣ ಮಾಡಿಕೊಂಡು ಈಗಾಗಲೇ ಕನ್ನಡ ಬಾವುಟವೊಂದನ್ನು ಆರಿಸಿ ನಿಲ್ದಾಣವನ್ನು ಸೃಷ್ಟಿಸಿಕೊಂಡಿದ್ದಾರೆ.

ಅಧಿಕಾರಿಗಳು ಗಮನಹರಿಸಿ: ಕೆರೆಯು ಅಕ್ರಮ ಒತ್ತುವರಿಯಾಗುತ್ತಿರುವುದನ್ನು ಕಾವೇರಿ ಮತ್ತು ಕಬಿನಿ ನಾಲಾ ವಿಭಾಗದ ನಿಗಮ ಮತ್ತು ನಗರಸಭೆ ಗಮನ ಹರಿಸಬೇಕು. ಕೆರೆಯಲ್ಲಿ ಅಂರ್ತಜಲ ಹೆಚ್ಚಿಸುವ ಕೆಲಸ ಮಾಡಿದಾಗ ಅಂತರ್ಜಲ ಹೆಚ್ಚುತ್ತದೆ. ಅಕ್ರಮ ಒತ್ತುವರಿಯಿಂದ ಅಂತರ್ಜಲ ಕುಸಿತಗೊಂಡು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ವಿಷಮ ಪರಿಸ್ಥಿತಿ ಎದುರುರಾಗಿದೆ.

ಕೆರೆಗಳ ನಾಶಕ್ಕೆ ಕಾರಣ: ಕೆರೆಯನ್ನು ಅಧಿಕಾರಿಗಳು ಕಂಡೂ ಕಾಣದಂತೆ ನಿರ್ಲಕ್ಷ್ಯ ವಹಿಸುತ್ತಿರುವುದು ಕೆರೆಗಳ ನಾಶಕ್ಕೆ ಕಾರಣವಾಗುತ್ತಿದೆ. ನ್ಯಾಯಾಲಯ ಯಾವುದೇ ಕೆರೆಕಟ್ಟೆಗಳನ್ನು ಒತ್ತುವರಿಯಿಂದ ಹಾಗುತ್ತಿದ್ದ ವೇಳೆ ಅದನ್ನು ಕೂಡಲೇ ತೆರವು ಮಾಡಿ ಕೆರೆ ಅಭಿವೃದ್ಧಿಪಡಿಸಿ ಅಂರ್ತಜಲ ಹೆಚ್ಚಿಸಬೇಕೆಂದು ತೀರ್ಪು ನೀಡಿದ್ದರು ಸಹ ಕೆರೆಗಳ ಒತ್ತುವರಿ ನಿರಂತರವಾಗಿ ಸಾಗುತ್ತಿದ್ದು, ಕೆರೆಗಳ ನಾಶಕ್ಕೆ ಕಾರಣವಾಗುತ್ತಿದೆ.

Advertisement

ಕೆರೆ ಅಭಿವೃದ್ಧಿ ಪಡಿಸುವ ಇಂಗಿತ: ಸರ್ಕಾರ ಕೋಟ್ಯಂತರ ರೂ. ಹಣ ಖುರ್ಚ ಮಾಡಿ ಅಂರ್ತಜಲ ಅಭಿವೃದ್ಧಿಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪಟ್ಟಣದ ಪ್ರಮುಖದ ಐದು ಕರೆಗಳಲ್ಲಿ 15 ರಿಂದ 25 ವರ್ಷದಿಂದಲೂ ಊಳೆತ್ತದೆ ಇರುವುದರಿಂದ ಕೆರೆಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದೆ. ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಬೇಕಾದ ಕೆರೆಗಳು ನಾಶವಾಗುತ್ತಿದೆ.

ಈ ಹಿಂದೆ ಶಾಸಕರಾಗಿದ್ದ ಎಸ್‌.ಜಯಣ್ಣ ಕೆರೆ ಅಭಿವೃದ್ಧಿಪಡಿಸಿ ವಾಯುವಿಹಾರ ಕೇಂದ್ರವನ್ನಾಗಿ ಮಾಡುವ ಮೂಲಕ ಸುಂದರತಾಣವನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದರು. ನಂತರ ಬಂದ ಶಾಸಕ ಎನ್‌.ಮಹೇಶ್‌ ಕೆರೆಯನ್ನು ಖಾಸಗಿ ವ್ಯಕ್ತಿಗಳಿಗೆ ದತ್ತು ನೀಡಿ ಅಭಿವೃದ್ಧಿ ಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಅಭಿವೃದ್ಧಿಪಡಿಸುವ ಬದಲು ಇರುವ ಕೆರೆಗಳನ್ನು ಉಳಿಸಿದರೆ ಸಾಕು ಎಂದು ಪರಿಸರ ಪ್ರೇಮಿಗಳ ಆಕ್ರೋಶವಾಗಿದ್ದು, ಕೂಡಲೇ ಅಧಿಕಾರಿಗಳು ಮತ್ತು ಚುನಾಯಿತ ಪ್ರತನಿಧಿಗಳು ಎಚ್ಚೆತ್ತು ಕೆರೆಗೆ ಕಾಯಕಲ್ಪ ನೀಡಬೇಕಾಗಿದೆ.

ಪಟ್ಟಣದ ಹೃದಯಭಾಗದಲ್ಲಿರುವ ಬೃಹತ್ತಾದ ಕೊಂಗಳಕೆರೆ ಸ್ಥಳವನ್ನು ಆಟೋ ನಿಲ್ದಾಣಕ್ಕಾಗಿ ಅಕ್ರಮ ಒತ್ತುವರಿ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ ಜನರಿಗೆ ತೊಂದರೆ ಕಂಡು ಬಂದ ಪಕ್ಷದಲ್ಲಿ ಕೂಡಲೇ ನಿಲ್ದಾಣವನ್ನು ತೆರವು ಮಾಡಲಾಗುವುದು.
-ನಾಗಶೆಟ್ಟಿ, ನಗರಸಭೆ ಪೌರಾಯುಕ್ತ

ಈ ಬಗ್ಗೆ ಇದುವರೆಗೂ ನಮ್ಮ ಗಮನಕ್ಕೆ ಬಂದಿರಲಿಲ್ಲ, ಕೂಡಲೇ ಕೆರೆ ಅಕ್ರಮ ಒತ್ತುವರಿಯನ್ನು ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿ ತೆರವು ಮಾಡಲಾಗುವುದು.
-ರಘು, ಕಾರ್ಯಪಾಲಕ ಅಭಿಯಂತರ

* ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next