Advertisement

ನಾಲೆಯಲ್ಲಿ ಈಜಲು ಹೋಗಿ ಇಬ್ಬರು ನೀರುಪಾಲು, ದೇವರ ಹರಕೆ ಪೂಜೆಗೆಂದು ಬಂದವರು ಮಸಣ ಸೇರಿದರು

06:40 PM Aug 16, 2022 | Team Udayavani |

ಕೊಳ್ಳೇಗಾಲ : ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲೂರು ಹೊಸಮಠದ ಬಳಿ ಇರುವ ಚೆಕ್ ಡ್ಯಾಮ್ ನಲ್ಲಿ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

Advertisement

ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಲಿಂಗನ ಪಟ್ಟಿ ಗ್ರಾಮದ ಸುನಿಲ್(21) ಚಂದ್ರು (19) ಎಂಬವವರೇ ನಾಲೆಯಲ್ಲಿ ಈಜಲು ಹೋಗಿ ನೀರುಪಾಲಾದವರು.

ಘಟನೆ ವಿವರ: ಮೂವತ್ತು ಜನರ ತಂಡವೊಂದು ದೇವರಿಗೆ ಹರಕೆ ಪೂಜೆ ಸಲ್ಲಿಸಲು ಬಂದಿದ್ದರು. ಪೂಜೆಯ ಬಳಿಕ ಪಂಕ್ತಿ ಬೋಜನ ಇನ್ನೂ ತಡವಾಗುತ್ತದೆ ಎ೦ದು ನೀರಾಟಿಕೆ ಆಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆಂದು ಪೋಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ. ಮಂಜುನಾಥ .ಎ.ಎಸ್.ಐ ಅಶ್ವಥ್ ಸಿಬಂದಿಗಳಾದ ವೀರೇಂದ್ರ ವೆಂಕಟೇಶ ಉಮಾಶಂಕರ್. ಭೇಟಿ ನೀಡಿ ಪರಿಶೀಲನೆಯ ಬಳಿಕ ಶವವನ್ನು ಹೊರ ತೆಗೆದು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.

ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement

ಇದನ್ನೂ ಓದಿ : ಏಕಾಏಕಿ ನಾಪತ್ತೆಯಾದ ಪೌರ ಕಾರ್ಮಿಕ : ಪತ್ನಿಗೆ ಹೊರಗುತ್ತಿಗೆ ಕೆಲಸ ನೀಡಲು ಮುಂದಾದ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next