Advertisement

Kolkata ಆಸ್ಪತ್ರೆ ಅವ್ಯವಹಾರ: ಮಾಜಿ ಪ್ರಾಚಾರ್ಯ ಮನೆ ಶೋಧ

01:46 AM Aug 26, 2024 | Team Udayavani |

ಹೊಸದಿಲ್ಲಿ: ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಸಂಭವಿಸಿದ ಆರ್‌.ಜಿ. ಕಾರ್‌ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅಕ್ರಮ ಆರೋಪಗಳ ಬಗ್ಗೆ ಸಿಬಿಐ ತನಿಖೆ ಶುರು ಮಾಡಿದೆ. ಆರಂಭದ ಹಂತವಾಗಿ ರವಿವಾರ ತನಿಖಾ ಸಂಸ್ಥೆ ಕಾಲೇಜಿನ ಮಾಜಿ ಪ್ರಿನ್ಸಿಪಾಲ್‌ ಸಂದೀಪ್‌ ಘೋಷ್‌, ಮಾಜಿ ಉಪ ಪ್ರಿನ್ಸಿಪಾಲ್‌ ಸಂಜಯ್‌ ವಶಿಷ್ಟ ಸೇರಿ 13 ಜನರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧಿಸಿದೆ.

Advertisement

ಆಸ್ಪತ್ರೆಯ ನಿರ್ವಹಣೆ ವಸ್ತುಗಳು ಮತ್ತು ರೋಗಿಗಳ ಆರೈಕೆ ವಸ್ತುಗಳ ಪೂರೈಕೆಯಲ್ಲಿನ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರವಿವಾರ ಬೆಳಗ್ಗೆ ಘೋಷ್‌ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಉಪ ಪ್ರಾಚಾರ್ಯ ವಶಿಷ್ಠ ಅವರನ್ನು ತೀವ್ರ ವಿಚಾರಣೆ ಗೊಳಪಡಿಸಿದರು ಎಂದು ತಿಳಿದು ಬಂದಿದೆ. ಸಾಕ್ಷ್ಯ ದೊರೆತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಸಾಕಷ್ಟು ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಳ್ಳು ಪತ್ತೆ ಪರೀಕ್ಷೆ: ಟ್ರೈನಿ ವೈದ್ಯೆ ಕೊಲೆ ಕೇಸಿನ ಆರೋಪಿ ಸಂಜಯ್‌ ರಾಯ್‌ಗೆ ರವಿವಾರ ಸುಳ್ಳು ಪತ್ತೆ ಪರೀಕ್ಷೆ ನಡೆಸಲಾಯಿತು. ಕೋಲ್ಕತಾದ ಪ್ರಸಿಡೆನ್ಸಿ ಜೈಲಿನಲ್ಲೇ ಈ ಪರೀಕ್ಷೆ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next