Advertisement

ಬಿಜೆಪಿ ಅಭ್ಯರ್ಥಿ ಸಮೀಕ್‌ ಭಟ್ಟಾಚಾರ್ಯ ಮೇಲೆ ಟಿಎಂಸಿ ಕಾರ್ಯಕರ್ತರಿಂದ ಹಲ್ಲೆ

09:20 AM Apr 21, 2019 | Team Udayavani |

ಕೋಲ್ಕತ : ಡಮ್‌ ಡಮ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಸಮೀಕ್‌ ಭಟ್ಟಾಚಾರ್ಯ ಅವರ ಮೇಲೆ ಹಾಗೂ ಅವರ ಕೇಂದ್ರ ಚುನಾವಣಾ ಕಾರ್ಯಾಲಯದ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ಮಾಡಿರುವುದಾಗಿ ವರದಿಯಾಗಿದೆ.

Advertisement

ಇದೇ ವೇಳೆ ಬಿಜೆಪಿ ಕೋಲ್ಕತ ಉತ್ತರ ಹೊರವಲಯ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಚಾಂದಿ ಚರಣ್‌ ರಾಯ್‌ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

ಚರಣ್‌ ಅವರ ಮೇಲಿನ ಹಲ್ಲೆಯಿಂದ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗೆ ಒಯ್ಯಲಾಗಿದೆ.

ಇದೇ ರೀತಿಯ ಇನ್ನೊಂದು ಘಟನೆಯಲ್ಲಿ ಬಿಜೆಪಿ ಹೂಗ್ಲಿ ಅಭ್ಯರ್ಥಿ ಲೋಕೇತ್‌ ಚಟರ್ಜಿ ಅವರ ಬಾಂದೇಲ್‌ ನಲ್ಲಿನ ಬಾಡಿಗೆ ಮನೆಯ ಮೇಲೆ ಕೆಲವು ದುಷ್ಕರ್ಮಿಗಳು ಇಂದು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next