Advertisement

ಸರ್ಕಾರಿ, ಖಾಸಗಿ ಸ್ಥಳಗಳಲ್ಲಿ ಕಟ್ಟಡ ತ್ಯಾಜ ! ಪಟ್ಟಣದ ಸೌಂದರ್ಯ ಹಾಳು

02:24 PM Nov 05, 2020 | sudhir |

ಬಂಗಾರಪೇಟೆ: ದಿನನಿತ್ಯದ ಕಸ ವಿಲೇವಾರಿ ಮಾಡಲಾಗದೆ ಪುರಸಭೆ ಹೈರಾಣಾಗಿರುವ ವೇಳೆ ಕಟ್ಟಡ ತ್ಯಾಜ್ಯ ಎಲ್ಲೆಂದರಲ್ಲಿ ಸುರಿಯುತ್ತಿರುವುದರಿಂದ ನಾನಾ ರೀತಿಯ ಸಮಸ್ಯೆಗಳು ಆರಂಭವಾಗಿವೆ.

Advertisement

ಪಟ್ಟಣದಲ್ಲಿರುವ ದೇವಾಲಯಗಳ ಜಮೀನು, ಕೆರೆ, ಕಾಲುವೆ, ಪಾರ್ಕ್‌, ರಸ್ತೆ ಬದಿ ಕಟ್ಟಡ ತ್ಯಾಜ್ಯ ಸುರಿಯುತ್ತಿರುವುದರಿಂದ ಪರಿಸರ ಹಾಳಾಗುತ್ತಿದೆ.

ಪಟ್ಟಣದ ಸೌಂದರ್ಯ ಹಾಳು: ತ್ಯಾಜ್ಯವನ್ನು ಖಾಸಗಿ ನಿವೇಶನಗಳಲ್ಲಿ ಬೆಳಗಾಗುವುದರಲ್ಲಿ ಸುರಿದು ಹೋಗಿರುತ್ತಾರೆ. ಪಟ್ಟಣದ ಗಡಿಭಾಗದಲ್ಲಿರುವ ವಾರ್ಡ್‌ಗಳ ಪಕ್ಕದಲ್ಲಿರುವ ಖಾಲಿ ಜಾಗಳಲ್ಲಿ ಹೆಚ್ಚಾಗಿ ಸುರಿದಿದ್ದಾರೆ. ರಾತ್ರಿ ವೇಳೆಯಲ್ಲಿ ಪಟ್ಟಣದ ಕೆಲವು ಕಡೆ ಹಳೆಯ ಕಟ್ಟಡಗಳನ್ನು ಕೆಡವಿ ಕಟ್ಟಡ ತ್ಯಾಜ್ಯವನ್ನು ಅಕ್ರಮವಾಗಿ ಸುರಿಯಲಾಗುತ್ತಿದೆ.

ದೇವಸ್ಥಾನ ಮತ್ತು ಸರ್ಕಾರಿ ಜಾಗದಲ್ಲಿ ಹಾಗೂ ರಸ್ತೆ ಬದಿಯಲ್ಲಿ ಯತೇತ್ಛವಾಗಿ ಕಟ್ಟಡ ತ್ಯಾಜ್ಯ ಸುರಿಯುವುದರಿಂದ ಪಟ್ಟಣದ ಸೌಂದರ್ಯ ಹಾಳಾಗುವ ಜೊತೆಗೆ ಮಣ್ಣಿನ ಫ‌ಲವತ್ತತೆ ಮತ್ತು ಪರಿಸರ ಹಾಳಾಗಿ ಜನರ ಆರೋಗ್ಯ ಕೆಡುತ್ತಿದೆ.

ಇದನ್ನೂ ಓದಿ:ಪ್ರವಾಸಿಗರ ಸೋಗಿನಲ್ಲಿ ಖೋಟಾ ನೋಟು ಚಲಾವಣೆ! ಪೊಲೀಸರಿಂದ ತಂದೆ, ತಾಯಿ, ಮಗನ ಬಂಧನ

Advertisement

ತೊಂದರೆ ತಪ್ಪಿಸಲಿ: ಯಾರೆಲ್ಲ ಹಳೆಯ ಕಟ್ಟಡ ಕೆಡವುತ್ತಾರೊ ಅವರಿಂದ ಪುರಸಭೆಯವರೇ ತ್ಯಾಜ್ಯವನ್ನು ಒಂದು ಸ್ಥಳ ನಿಗದಿ ಮಾಡಿ ಸಂಗ್ರಹಿಸಿ ಮರುಬಳಕೆಗೆ ಯೋಜನೆ ರೂಪಿಸಿದರೆ ಒಳ್ಳೆಯದಾಗಲಿದೆ. ದೊಡ್ಡ ಕಟ್ಟಡಗಳನ್ನು ಕೆಡವಿದಾಗ ಸಾವಿರಾರು ಟನ್‌ ತ್ಯಾಜ್ಯದಿಂದ ಜನರಿಗೆ ತೊಂದರೆ ಉಂಟಾಗುವುದನ್ನು ತಪ್ಪಿಸಬಹುದಾಗಿದೆ.

ಎಲ್ಲೆಂದರಲ್ಲಿ ತ್ಯಾಜ್ಯ: ಪುರಸಭೆ ಬಸ್‌ ನಿಲ್ದಾಣದ ಪಕ್ಕದ ಚಂದ್ರಮೌಳೇಶ್ವರ ದೇವಾಲಯಕ್ಕೆ ಸೇರಿದ ಮುಜರಾಯಿ ಇಲಾಖೆಯ ಖಾಲಿ ಸ್ಥಳದಲ್ಲಿ ಹೆಚ್ಚಾಗಿ ಕಟ್ಟಡ ತ್ಯಾಜ್ಯ ಸುರಿಯಲಾಗಿದೆ. ಇದನ್ನು ತೆರವುಗೊಳಿ ಸಲು ಸರ್ಕಾರಕ್ಕೆ ಲಕ್ಷಗಟ್ಟಲೇ ಖರ್ಚು ಬರಲಿದೆ. ಪಟ್ಟಣದ ದೊಡ್ಡಕೆರೆ ಹಾಗೂ ಅತ್ತಿಗಿರಿಕೊಪ್ಪ ಕೆರೆಗಳ ಅಂಗಳದಲ್ಲಿ ಸಹ ತ್ಯಾಜ್ಯ ಸುರಿಯಲಾಗುತ್ತಿದೆ. ನೂತನವಾಗಿ ನಿರ್ಮಿಸಿರುವ ವಾಲ್ಮೀಕಿ ಭವನದ ಪಕ್ಕದಲ್ಲಿಯೂ ಕಸ ಸುರಿಯಲಾಗುತ್ತಿದೆ. ಕಟ್ಟಡ ತ್ಯಾಜ್ಯ ಸುರಿಯುವವರ ಮೇಲೆ ಕ್ರಮ ಜರುಗಿಸಲು ಪುರಸಭೆಗೆ ಅವಕಾಶವಿದೆ. ತ್ಯಾಜ್ಯ ಸುರಿಯುವವರಿಗೆ ತಿಳಿವಳಿಕೆ ಹೇಳಿ ಸರಿಪಡಿಸಬೇಕಿದೆ. ಪುರಸಭೆ ಮನಸ್ಸು ಮಾಡಿದರೆ ಕಟ್ಟಡ ನಿರ್ಮಾಣದ ಗುತ್ತಿಗೆದಾರರ ಸಭೆ ಮಾಡಿ ಹಳೆ ಕಟ್ಟಡ ತ್ಯಾಜ್ಯದ ಮರುಬಳಕೆಗೆ ಯೋಜನೆ ರೂಪಿಸಬಹುದಾಗಿದೆ.

– ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next