Advertisement

ಕೆ.ಜಿ.ಹಳ್ಳಿ ಲೈಂಗಿಕ ದೌರ್ಜನ್ಯವಲ್ಲ :ಬಾವ-ನಾದಿನಿ ಬಕ್ರಾ ಮಾಡಿದ್ದು!

08:51 AM Jan 08, 2017 | Team Udayavani |

 ಬೆಂಗಳೂರು: ಎಚ್‌ಬಿಆರ್‌ ಲೇಟ್‌ನಲ್ಲಿ ಶುಕ್ರವಾರ ನಡೆದಿದೆ ಎನ್ನಲಾದ ಯುವತಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಭಾರಿ ಟ್ವಿಸ್ಟ್‌ ಪಡೆದುಕೊಂಡಿದೆ. ಈ ಸಂಬಂಧ ತನಿಖೆ ಚುರುಕುಗೊಳಿಸಿರುವ ಕೆ.ಜಿ. ಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

Advertisement

ಬಂಧಿತ ಆರೋಪಿ ಇರ್ಷಾದ್‌ ಎಂದು ಪೊಲೀಸರು ತಿಳಿಸಿದ್ದು, ಸಂತ್ರಸ್ತ ಯುವತಿಯ ಅಕ್ಕನ ಗಂಡನಾಗಿದ್ದು ಅಚ್ಚರಿಯಂದರೆ ಇಬ್ಬರೂ ಕಳೆದ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಿರುವ ವೇಳೆ ಈ ರೀತಿ ಹೈಡ್ರಾಮಾ ಮಾಡಿ ಮುಂದೆ ಮದುವೆಯಾಗುವ ಯೋಚನೆಯಲ್ಲಿದ್ದರು ಎಂದು ಹೇಳಲಾಗಿದೆ. 

ಲೈಂಗಿಕ ಕಿರುಕುಳಕ್ಕೊಳಗಾದ ಯುವತಿಯನ್ನು ಯಾರು ಮದುವೆಯಾಗಲು ಮುಂದೆ ಬರುವುದಿಲ್ಲ, ಆಗ ತಾನು ಬಾಳು ಕೊಡಲು ಮುಂದಾಗಿದ್ದ ಎಂದು ಹೇಳಲಾಗಿದೆ. 

ಘಟನೆ ಕುರಿತು ಸಂತ್ರಸ್ತ ಯುವತಿ ಯಿಂದ ಪೊಲೀಸರು ಹೇಳಿಕೆ ಪಡೆದಿದ್ದು, ತನಗೆ ಆರೋಪಿ ನಾಲಿಗೆ ಕಚ್ಚಿಲ್ಲ ಎಂದು ಗೊಂದಲಕಾರಿ ಹೇಳಿಕೆ ನೀಡಿದ್ದಳು. 

ಪ್ರಕರಣದ ದುಷ್ಕರ್ಮಿ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದರು, ಮೊಬೈಲ್‌ ಕರೆಗಳ ಪರಿಶೀಲನೆ ನಡೆಸಿದ್ದರು. ಜತೆಗೆ ಎಚ್‌ಬಿಆರ್‌ ಲೇಔಟ್‌ ಹಾಗೂ ಗೋವಿಂದಪುರ ಜಂಕ್ಷನ್‌ ವ್ಯಾಪ್ತಿಯ ಸಿಸಿಟಿವಿಗಳನ್ನು ವಶಕ್ಕೆ ಪಡೆದು ಪರೀಕ್ಷೆಗೊಳಪಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next