Advertisement

ರೈತರಿಗೆ ಕಿಸಾನ್‌ ಸಮ್ಮಾನ್‌ ಮಾಹಿತಿ

09:12 AM Aug 10, 2020 | Suhan S |

ಮಾಗಡಿ: ತಾಲೂಕಿನ ಚಂದೂರಾಯನ ಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 6ನೇ ಕಂತಿನ ನಗದು ವರ್ಗಾವಣೆ ಮತ್ತು ಕೃಷಿ ಮೂಲ ಸೌಲಭ್ಯ ನಿಧಿಯ ಉದ್ಘಾಟನೆ ಕುರಿತು ನೇರ ವೀಕ್ಷಣೆ ಮಾಡಲಾಯಿತು.

Advertisement

ಕೇಂದ್ರದ ತೋಟಗಾರಿಕಾ ವಿಜ್ಞಾನಿ ವಿಕಾಸ್‌ ಅವರು ನೇರ ಪ್ರಸಾರದ ಮುಖ್ಯ ಉದ್ದೇಶಗಳನ್ನು ಕನ್ನಡಕ್ಕೆ ಅನುವಾದಿಸಿ ರೈತರಿಗೆ ಮಾಹಿತಿ ನೀಡಿದರು. ಹಲವಾರು ರಾಜ್ಯಗಳ ಸಂಘ ಸಂಸ್ಥೆಗಳ ಜತೆ ನೇರ ಸಂವಾದದಲ್ಲಿ ರೈತರಿಗೆ ಸೂಕ್ತ ಸಮಯದಲ್ಲಿ ಕೃಷಿ ಮೂಲ ಸೌಕರ್ಯ ಒದಗಿಸಬೇಕು, ಮೌಲ್ಯವರ್ಧಿತ ಉತ್ಪನ್ನಗಳ ಮಹತ್ವದ ಕುರಿತು ತಿಳಿಸಿಕೊಟ್ಟರು. ಕೇಂದ್ರದ ಮತ್ತೋರ್ವ ಕೃಷಿ ವಿಸ್ತರಣೆ ವಿಜ್ಞಾನಿ ಚೈತ್ರಾ ಮಾತನಾಡಿ, ಈ ಯೋಜನೆಯಿಂದ ರೈತರಿಗೆ ಸರಿಯಾದ ಸಮಯದಲ್ಲಿ ಬಿತ್ತನೆ ಬೀಜ, ಗೊಬ್ಬರ ಮತ್ತು ಕೀಟನಾಶಕ ಖರೀದಿಗೆ ಸಹಾಯವಾಗುತ್ತದೆ ಎಂದು ತಿಳಿಸಿಕೊಟ್ಟರು.

ಕೇಂದ್ರದ ವಿಷಯ ತಜ್ಞರಾದ ಶಾಂತಾಬಲಗೊಂಡ, ಕ್ಷೇತ್ರ ವ್ಯವಸ್ಥಾಪಕ ರಂಜಿತ್‌ಕುಮಾರ್‌, ಸುಮಾರು 22 ರೈತ, ರೈತ ಮಹಿಳೆಯರು ಭಾಗವಹಿಸಿದ್ದರು. ಈ ವೇಳೆ ಕೆವಿಕೆಯ 45 ರೈತರ ವಾಟ್ಸಪ್‌ ಗುಂಪುಗಳಿಗೆ ಲಿಂಕ್‌ ಕಳುಹಿಸಿ ನೋಡಲು ಅನುವು ಮಾಡಿಕೊಡಲಾಯತು.

Advertisement

Udayavani is now on Telegram. Click here to join our channel and stay updated with the latest news.

Next