Advertisement

ಅನುಷ್ಕಾಗೆ ರಿಜಿಜು ಬೆಂಬಲ

12:09 PM Jun 19, 2018 | Harsha Rao |

ಹೊಸದಿಲ್ಲಿ: ಮುಂಬಯಿನಲ್ಲಿ ಐಷಾರಾಮಿ ಕಾರಲ್ಲಿ ಕುಳಿತು ರಸ್ತೆಯ ಮೇಲೆ ಕಸ ಚೆಲ್ಲಿದ ವ್ಯಕ್ತಿಗೆ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಬೈದು ವಿಡಿಯೋ ಬಿಡುಗಡೆ ಮಾಡಿದ ವಿಚಾರ ಸಂಬಂಧ ಕೇಂದ್ರ ಸಚಿವ ಕಿರಣ್‌ ರಿಜಿಜು ಮಾತ ನಾಡಿದ್ದು, ಅನುಷ್ಕಾರನ್ನು ಬೆಂಬಲಿಸಿದ್ದಾರೆ. ಅನುಷ್ಕಾ ಹಾಗೂ ಕೊಹ್ಲಿ ದಂಪತಿಗೆ ಜನಪ್ರಿಯತೆ ಅಗತ್ಯವಿಲ್ಲ. ಅವರು ಗೌಪ್ಯತೆ ಬಯಸಬಹುದಿತ್ತು. ನಮ್ಮ ವರ್ತನೆ ನಮ್ಮ ಮನಸ್ಥಿತಿಯನ್ನು ಸೂಚಿಸುತ್ತದೆ. ನೈತಿಕವಾಗಿ ವರ್ತಿಸುವುದು ಶ್ರೀಮಂತಿಕೆ ಹಾಗೂ ಶಿಕ್ಷಣದಿಂದ ಬರುವುದಿಲ್ಲ. ಭಾರತವನ್ನು ಸ್ವತ್ಛವಾಗಿರಿಸೋಣ ಎಂದು ಕಿರಣ್‌ ಟ್ವೀಟ್‌ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿತ್ತು. ನಂತರ ಕಸ ಚೆಲ್ಲಿದವನು ನಾನೇ ಎಂದು ಹೇಳಿಕೊಂಡ ಅರ್ಹಾನ್‌ ಸಿಂಗ್‌, ಸಾಮಾನ್ಯ ರಸ್ತೆ ಬದಿಯ ವ್ಯಕ್ತಿಯಂತೆ ಅನುಷ್ಕಾ ಕಿರುಚಾಡಿದ್ದಳು ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next