Advertisement

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

01:08 PM Sep 22, 2024 | Team Udayavani |

ಸದ್ಯ ಕನ್ನಡ ಚಿತ್ರರಂಗ ಕೆಟ್ಟ ಕಾರಣಗಳಿಂದಲೇ ಗುರುತಿಸಿಕೊಳ್ಳುತ್ತಿದೆ. ಇಲ್ಲಿ ಒಳ್ಳೆ ಕಾರಣಗಳು ಕಾಣುತ್ತಿಲ್ಲ. ಹಾಗಾಗಿ ನಾವು ಸುದ್ದಿಯಲ್ಲಿದ್ದೇವೆ ಎಂದು ನಟ ಸುದೀಪ್‌ ಹೇಳಿದರು.

Advertisement

ಸ್ಯಾಂಡಲ್‌ವುಡ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಜೆರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರರಂಗದ ಕಲಾವಿದರು, ತಂತ್ರಜ್ಞರು ಎಲ್ಲರೂ ಒಟ್ಟಾಗಿ ಸೇರಿರುವುದು, ನಮ್ಮ ಚಿತ್ರರಂಗದ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದವರಿಗೆ ಒಂದು ಸಂದೇಶ ನೀಡಿದ ಹಾಗಿದೆ. ನಾವೆಲ್ಲ ಒಂದು. ಕನ್ನಡ ಚಿತ್ರರಂಗದ ಬಗ್ಗೆ ಯಾರೇ ಏನೇ ಮಾತಾಡಿದರೂ, ಯಾರೇ ದೂರು ಕೊಟ್ಟರೂ ನಮಗೆ ಇದರ ಮೇಲೆ ಹೆಮ್ಮೆ ಇದೆ, ಮುಂದೆಯೂ ಇರುತ್ತೆ. ಎಲ್ಲರ ಪರಿಶ್ರಮ, ನಂಬಿಕೆ, ವಿಶ್ವಾಸದಿಂದ ಚಿತ್ರರಂಗ ಇಷ್ಟು ವರ್ಷಗಳಿಂದ ಸಾಗಿಬಂದಿದೆ. ಇಂಥ ಸಮಯದಲ್ಲಿ ಈ ರೀತಿಯ ಕಾರ್ಯಕ್ರಮ ಮಾಡಿರುವುದು ಒಳ್ಳೆಯ ಸಂಗತಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next