Advertisement

Khalistani: ಇಂಗ್ಲೆಂಡ್‌ನಲ್ಲೂ ಖಲಿಸ್ಥಾನಿ ಪುಂಡಾಟ

02:34 AM Oct 01, 2023 | Team Udayavani |

ಲಂಡನ್‌: ಸ್ಕಾಟ್ಲಂಡ್‌ನ ಗ್ಲ್ಯಾಸ್ಕೋದಲ್ಲಿರುವ ಗುರುದ್ವಾರದ ಭೇಟಿಗಾಗಿ ತೆರಳಿದ್ದ ಲಂಡನ್‌ನಲ್ಲಿ ಭಾರತೀಯ ಹೈಕಮಿಷನರ್‌ ವಿಕ್ರಮ್‌ ದೊರೈಸ್ವಾಮಿ ಅವರಿಗೆ ಖಲಿಸ್ಥಾನಿಗಳು ಪ್ರತಿರೋಧ ತೋರಿದ ಘಟನೆ ನಡೆದಿದೆ. ಇದರ ವಿರುದ್ಧ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Advertisement

ವಿಕ್ರಮ್‌ ಅವರು ಶುಕ್ರವಾರ ಗ್ಲ್ಯಾಸ್ಕೋದಲ್ಲಿರುವ ಗುರು ಗ್ರಂಥ ಸಾಹಿಬ್‌ ಗುರುದ್ವಾರಕ್ಕೆ ತೆರಳಿ ಅಲ್ಲಿನ ಮುಖಂಡರ ಜತೆ ಮಾತುಕತೆ ನಡೆಸಬೇಕಾಗಿತ್ತು. ಆದರೆ ಕೆಲವು ಖಲಿಸ್ಥಾನಿಗಳು ಉದ್ದೇಶಪೂರ್ವಕವಾಗಿ ಅವರನ್ನು ತಡೆದು ನಿಮಗೆ ಸ್ವಾಗತವಿಲ್ಲ ಎಂದಿದ್ದರು. ಈ ಬಗ್ಗೆ ಇಂಗ್ಲೆಂಡ್‌ನಲ್ಲಿ ಹೈಕಮಿಷನರ್‌ ಕಚೇರಿ ಶನಿವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಮೂವರು ಸಿಕ್ಖರು ಅಡ್ಡಿಯುಂಟು ಮಾಡಿದ್ದರು. ಇವರಲ್ಲಿ ಒಬ್ಬ ತೀರಾ ಕ್ರೂರವಾಗಿ ವರ್ತಿಸಿದ್ದ ಎಂದು ಹೇಳಿದೆ. ಒಂದು ವೇಳೆ ಗುರುದ್ವಾರದ ಮುಖಂಡರು ಬರದೇ ಹೋಗಿದ್ದಿದ್ದರೆ ದೊಡ್ಡ ಅನಾಹುತವೇ ಆಗುವ ಸಂಭವವಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next