Advertisement

ಮಹಿಳೆ ಜತೆ ಲಘು ಮಾತು ಕೇರಳ ಸಚಿವ ರಾಜೀನಾಮೆ

03:50 AM Mar 27, 2017 | Team Udayavani |

ಕಲ್ಲಿಕೋಟೆ/ತಿರುವನಂತಪುರ: ಅಧಿಕಾರಕ್ಕೆ ಏರಿದ ಹತ್ತು ತಿಂಗಳಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸಂಪುಟದಿಂದ ಎರಡನೇ ಸಚಿವ ರಾಜೀನಾಮೆ ನೀಡಿದ್ದಾರೆ. 

Advertisement

ಮಹಿಳೆ ಜತೆ ಲಘುವಾಗಿ ಮಾತನಾಡಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ಸಾರಿಗೆ ಸಚಿವ, ಎನ್‌ಸಿಪಿ ಶಾಸಕ ಎ.ಕೆ.ಶಶೀಂದ್ರನ್‌ ಸಚಿವ ಸ್ಥಾನ ತ್ಯಜಿಸಿದ್ದಾರೆ. ಸಚಿವರು ಮಾತನಾಧಿಡಿದ್ದಾರೆ ಎಂದು ಹೇಳಲಾಗಿರುವ ಧ್ವನಿಮುದ್ರಿಕೆಯನ್ನು ಮಲಯಾಳಂ ಸುದ್ದಿವಾಹಿನಿ ಪ್ರಸಾರ ಮಾಡಿದೆ. ತಕ್ಷಣವೇ ಕಲ್ಲಿಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಶೀಂದ್ರನ್‌ ಸಿಎಂ ಸೂಚನೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೇನೆ. ಸ್ಥಾನ ಬಿಟ್ಟುಕೊಟ್ಟಿರುವುದರಿಂದ ಆರೋಪ ಒಪ್ಪಿಕೊಂಡಂತೆ ಅಲ್ಲ ಎಂದಿದ್ದಾರೆ. ಏ.12ರಂದು ಮಲಪ್ಪುರ ಉಪಚುನಾವಣೆ ನಡೆಯಲಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಕೆಲ ತಿಂಗಳ ಹಿಂದೆ ಕೈಗಾರಿಕಾ ಸಚಿವ ಇ.ಕೆ.ಜಯರಾಜನ್‌ ಸಂಬಂಧಿಕರಿಬ್ಬರಿಗೆ ಕೆಲಸ ತೆಗೆಸಿಧಿಕೊಡಲು ಮುಂದಾಗಿದ್ದ ವಿಚಾರ ಬಹಿರಂಗಗೊಂಡು ಸ್ಥಾನ ತ್ಯಜಿಸಿದ್ದರು. ಇದೊಂದು ಗಂಭೀರ ವಿಚಾರವೆಂದು ಸಿಎಂ ವಿಜಯನ್‌ ಹೇಳಿದರೆ, ಪ್ರತಿಪಕ್ಷ ಕಾಂಗ್ರೆಸ್‌ ಘಟನೆ ನಾಚಿಕೆಗೇಡಿನದ್ದು ಎಂದಿದೆ.
 

Advertisement

Udayavani is now on Telegram. Click here to join our channel and stay updated with the latest news.

Next