Advertisement

‘India’ ಇತರರು ನೀಡಿದ ಹೆಸರು ‘ಭಾರತ್’ ಅನ್ನುವುದೇ ಸೂಕ್ತ: ಆರಿಫ್ ಮೊಹಮ್ಮದ್ ಖಾನ್

06:17 PM Oct 26, 2023 | Team Udayavani |

ತಿರುವನಂತಪುರಂ: ಶಾಲಾ ಪಠ್ಯಪುಸ್ತಕಗಳಲ್ಲಿ “ಇಂಡಿಯಾ ” ಬದಲಿಗೆ “ಭಾರತ್” ಎಂದು ಬದಲಾಯಿಸಲು NCERT ಸಮಿತಿಯ ಶಿಫಾರಸನ್ನು ಕೇರಳದ ಗವರ್ನರ್ ಆರಿಫ್ ಮೊಹಮ್ಮದ್ ಖಾನ್ ಅವರು ಗುರುವಾರ ಬೆಂಬಲಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್, “ಇಂಡಿಯಾ” ಎಂಬ ಹೆಸರನ್ನು ಇತರರಿಂದ ನೀಡಲಾಯಿತು, ಆದರೆ “ಭಾರತ್” ಎಂಬುದು ದೇಶದ ಜನರು ಆಯ್ಕೆ ಮಾಡಿದ ಹೆಸರಾಗಿದೆ ಎಂದರು.

”ಸಂವಿಧಾನಕ್ಕೆ ಯಾವುದೇ ತಿದ್ದುಪಡಿ ಮಾಡಲು ಯಾರೂ ಮುಂದಾಗಿಲ್ಲ.ಅವರು ಹೇಳಿದ್ದು, ನಾನು ಸರಿಯಾಗಿ ಓದಿದ್ದರೆ, ಅಧಿಕೃತ ಸಂವಹನದಲ್ಲಿ, ನಾವು ಭಾರತ್ ಎಂಬ ಪದವನ್ನು ಹೆಚ್ಚು ಬಳಸುತ್ತೇವೆ ಮತ್ತು ನೀವು ಅದನ್ನು ನೋಡಿದರೆ, ಭಾರತವು ನಮಗೆ ನಾವೇ ಇಟ್ಟಿರುವ ಹೆಸರು ಎಂದು ನಾನು ಭಾವಿಸುತ್ತೇನೆ. ಇಂಡಿಯಾ ನಮಗೆ ಇತರರು ನೀಡಿದ ಹೆಸರು” ಎಂದರು.

ಎನ್‌ಸಿಇಆರ್‌ಟಿ ಸಮಿತಿಯ ಪ್ರಸ್ತಾಪದ ಬಗ್ಗೆ ತೀವ್ರ ವಿವಾದದ ನಡುವೆ ಖಾನ್ ಅವರು ಈ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next