Advertisement

Kerala; ವರದಕ್ಷಿಣೆ ವಿರುದ್ಧ 200 ವರ್ಷ ಹಿಂದೆಯೇ ರಾಜಾಜ್ಞೆ

12:49 AM Feb 19, 2024 | Team Udayavani |

ತಿರುವನಂತಪುರ: ವರದಕ್ಷಿಣೆ ಹೆಸರಿ ನಲ್ಲಿ ಮಹಿಳೆಯರ ಮೇಲೆ ಕಿರು ಕುಳ, ದೌರ್ಜನ್ಯಗಳು ಮತ್ತು ಹಿಂಸಾ ಚಾರದ ಪ್ರಕರಣಗಳು ಕಂಡುಬರುವ ಮೊದಲೇ ಇಂಥದ್ದೊಂದು ಪಿಡುಗಿನ ವಿರುದ್ಧ ದಕ್ಷಿಣ ಭಾರತದ ರಾಣಿಯೊಬ್ಬರು 200 ವರ್ಷಗಳ ಹಿಂದೆ ರಾಜಪ್ರಭುತ್ವದ ಆಳ್ವಿಕೆಯಲ್ಲೇ ವರದಕ್ಷಿಣೆ ನಿಯಂತ್ರಣಕ್ಕೆ ಉಪಕ್ರಮಗಳನ್ನು ತೆಗೆದುಕೊಂಡಿದ್ದರು ಎಂಬುದು ಇದೀಗ ಬೆಳಕಿಗೆ ಬಂದಿದೆ.

Advertisement

1823ರಲ್ಲಿ ತಿರುವಾಂಕೂರು ರಾಜ್ಯದ ರಾಣಿ ಗೌರಿ ಪಾರ್ವತಿ ಬಾಯಿ, ಅಂದಿಗೆ ಅಸ್ತಿತ್ವದಲ್ಲಿದ್ದ ವರದಕ್ಷಿಣೆ ಕ್ರಮದ ವಿರುದ್ಧ ಸಿಡಿದೆದ್ದಿರು ಎಂಬುದು ಕೇರಳ ಸರಕಾರದ ಪತ್ರಗಾರದಲ್ಲಿರುವ ದಾಖಲೆಗಳಿಂದ ಬಹಿರಂಗ ಗೊಂಡಿದೆ. ದಾಖಲೆಗಳ ಪ್ರಕಾರ, ಅಂದಿಗೆ ಬ್ರಾಹ್ಮಣ ಸಮುದಾಯ ದ ಯುವತಿಯರನ್ನು ಮದುವೆಯಾಗಲು ಹೆಚ್ಚಿನ ವರದಕ್ಷಿಣೆ ನೀಡಬೇಕಿತ್ತು. ಈ ವಿಚಾರ ಪ್ರಶ್ನಿಸಿದ ರಾಣಿ, ವರದಕ್ಷಿಣೆ ನೀಡುವುದಕ್ಕೆ ಮಿತಿ ವಿಧಿಸಿ ರಾಜಾಜ್ಞೆ ಹೊರಡಿಸಿದ್ದಾರೆ. ವರದಕ್ಷಿಣೆ ಸಂಪೂರ್ಣ ವಾಗಿ ನಿಷೇಧಿಸದಿದ್ದರೂ ವಧುವಿಗೆ ಹೊರೆಯಾಗದಂತೆ ಮಿತಿ ವಿಧಿಸುವ ಮೂಲಕ ಕ್ರಮ ಕೈಗೊಂಡಿದ್ದರು ವರ ದಕ್ಷಿಣೆ ಕಿರುಕುಳ ಪ್ರಕರಣಗಳ ಹೆಚ್ಚಳದ ನಡುವೆ ಈ ವಿಚಾರ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next