Advertisement

ಕೆಮ್ಮಣ್ಣು: ಕೊಲೆಯಲ್ಲ, ಸಹಜ ಸಾವು

11:42 PM Feb 17, 2023 | Team Udayavani |

ಮಲ್ಪೆ: ಕೆಮ್ಮಣ್ಣು ಪಂಚಾಯತ್‌ ಕಚೇರಿ ಬಳಿ ಮೃತಪಟ್ಟ ವ್ಯಕ್ತಿಯದು ಕೊಲೆಯಲ್ಲ, ಸಹಜ ಸಾವು ಎಂದು ಮಲ್ಪೆ ಪೊಲೀಸರ ತನಿಖೆಯ ವೇಳೆ ತಿಳಿದುಬಂದಿದೆ. ಸೊರಬದ ಹನುಮಂತಪ್ಪ (48) ಮೃತಪಟ್ಟ ವ್ಯಕ್ತಿ.

Advertisement

ಕೆಮ್ಮಣಿನಲ್ಲಿರುವ ಎಪಿಎಂಸಿ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಟೆಂಪೋ ರಿಕ್ಷಾದಲ್ಲಿ ಕಲ್ಲಂಗಡಿ ತಂದು ಮಾರಾಟ ಮಾಡುತ್ತಿದ್ದರು. ಈ ವೇಳೆ ವ್ಯಕ್ತಿಯೋರ್ವರು ಕುಡಿದು ಬಂದು ಟೆಂಪೋದಲ್ಲಿ ಮಲಗಿದ್ದರು. ಆತ ಏಳದೇ ಇರುವುದನ್ನು ಕಂಡು ಟೆಂಪೋದವರು ಅವರು ದಿನಾ ಮಲಗುತ್ತಿದ್ದ ಜಾಗದಲ್ಲಿ ಬಿಟ್ಟು ಹೋಗಿದ್ದರು.

ಆತ ವಿಪರೀತ ಮದ್ಯಪಾನ ಮಾಡಿದ್ದರಿಂದ ಜನರು ಆತನ ದೇಹದಲ್ಲಿ ಯಾವುದೇ ಸ್ಪಂದನೆ ಇಲ್ಲದ್ದನ್ನು ನೋಡಿ ಕೊಲೆ ಮಾಡಿ ಎಸೆದಿದ್ದಾರೆ ಎಂದು ಅಂದುಕೊಂಡಿದ್ದರು. ಮೇಲ್ನೋಟಕ್ಕೆ ಪರಿಶೀಲನೆ ನಡೆಸಿದಾಗ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿರಲಿಲ್ಲ. ಇವರ ಮಧ್ಯೆ ಯಾವುದೇ ಗಲಾಟೆಗಳಾಗಿಲ್ಲ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಅಸ್ವಸ್ಥತೆಯಿಂದ ಬಳಲಿ ಆತ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next