Advertisement

ಕೇಜ್ರಿ ದಿಲ್ಲಿ ಆಳುವ ಹಕ್ಕನ್ನು ಕಳೆದುಕೊಂಡಿದ್ದಾರೆ:ಕಾಂಗ್ರೆಸ್‌

04:53 PM Jan 19, 2018 | Team Udayavani |

ಹೊಸದಿಲ್ಲಿ  : ಚುನಾವಣಾ ಆಯೋಗ 20 ಆಪ್‌ ಶಾಸಕರ ಅನರ್ಹತೆಗೆ ಶಿಫಾರಸು ಮಾಡಿರುವ ಕಾರಣ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅಧಿಕಾರದಲ್ಲಿರುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ದಿಲ್ಲಿ ಕಾಂಗ್ರೆಸ್‌ ಮುಖ್ಯಸ್ಥ ಅಜಯ್‌ ಮಾಕನ್‌ ಅವರು ಇಂದು ಶುಕ್ರವಾರ ಹೇಳಿದ್ದಾರೆ.

Advertisement

ಇಪ್ಪತ್ತು ಆಪ್‌ ಶಾಸಕರು ಸಂಸದೀಯ ಕಾರ್ಯದರ್ಶಿಗಳಾಗಿ ನಿಯಮ ಬಾಹಿರವಾಗಿ ಸಚಿವ ಸೌಕರ್ಯಗಳನ್ನು ಅನುಭವಿಸುತ್ತಿದ್ದರು. ಅಂತೆಯೇ ಚುನಾವಣಾ ಆಯೋಗ ಈ 20 ಆಪ್‌ ಶಾಸಕರ ಅನರ್ಹತೆಗೆ ರಾಷ್ಟ್ರಪತಿಗೆ ಶಿಫಾರಸು ಮಾಡಿದೆ. ತನ್ನ ಸಚಿವ ಸಂಪುಟದ ಅರ್ಧಾಂಶ ಸಚಿವರು ಅನರ್ಹತೆಗೆ ಗುರಿಯಾಗಿರುವುದರಿಂದ ಮುಖ್ಯಮಂತ್ರಿ ಕೇಜ್ರಿವಾಲ್‌ ಅಧಿಕಾರದಲ್ಲಿ ಇರುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಮಾಕನ್‌ ಟ್ವೀಟ್‌ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next