Advertisement

Politics: ಪುತ್ರನನ್ನು ಸಿಎಂ ಮಾಡುವುದೇ ಕೆಸಿಆರ್‌ ಗುರಿ: ಅಮಿತ್‌ ಶಾ

09:46 PM Oct 10, 2023 | Team Udayavani |

ಅದಿಲಾಬಾದ್‌: ಕಳೆದ 10 ವರ್ಷಗಳ ಆಡಳಿತದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು ಎಂದೂ ಬಡವರ ಪರವಾಗಿ ಕೆಲಸ ಮಾಡಲಿಲ್ಲ. ಕೇವಲ ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡುವುದು ಹೇಗೆ ಎನ್ನುವುದಕ್ಕೆ ಲಕ್ಷ್ಯ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೂರಿದ್ದಾರೆ.

Advertisement

ತೆಲಂಗಾಣದ ಅದಿಲಾಬಾದ್‌ನಲ್ಲಿ ನಡೆದ ಬಿಜೆಪಿ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ಚುನಾವಣೆ ಸಮಯದಲ್ಲಿ ಬುಡಕಟ್ಟು ಜನರಿಗೆ ಡಬಲ್‌ ಬೆಡ್‌ರೂಮ್‌ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಬಿಆರ್‌ಎಸ್‌ ಪಕ್ಷವು ಆಶ್ವಾಸನೆ ನೀಡಿತ್ತು. ಆದರೆ ಕೆಸಿಆರ್‌ ಸರ್ಕಾರ ಅದನ್ನು ಈಡೇರಿಸಲಿಲ್ಲ’ ಎಂದು ಕಿಡಿಕಾರಿದ್ದಾರೆ.

“ಅಸಾಸುದ್ದೀನ್‌ ಓವೈಸಿ ನೇತೃತ್ವದ ಎಐಎಂಐಎಂ ನಿರ್ದೇಶನದಂತೆ ತೆಲಂಗಾಣ ಸರ್ಕಾರ ನಡೆಯುತ್ತಿದೆ. ಕೆಸಿಆರ್‌ ಸರ್ಕಾರದ ಕಾರಿನ ಸ್ಟೀರಿಂಗ್‌ ಮಜ್ಲಿಸ್‌ಗಳ ಕೈಗಳಲ್ಲಿ ಇದೆ. ಮಜ್ಲಿಸ್‌ಗಳ ನಿರ್ದೇಶನದಂತೆ ತೆಲಂಗಾಣವನ್ನು ನಡೆಸಲು ನೀವು ಬಯಸುವಿರಾ?’ ಎಂದು ಅಮಿತ್‌ ಶಾ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next