Advertisement

ಬಿಜೆಪಿಗೆ ಸೇರಿದ ಕೆ.ಸಿ.ರಾಮಮೂರ್ತಿ

11:04 PM Oct 22, 2019 | Lakshmi GovindaRaju |

ನವದೆಹಲಿ: ಇತ್ತೀಚೆಗಷ್ಟೇ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಕೆ.ಸಿ.ರಾಮಮೂರ್ತಿ ಈಗ ಬಿಜೆಪಿಗೆ ಸೇರಿದ್ದಾರೆ. ಇವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಭೂಪೇಂದ್ರ ಯಾದವ್‌ ಮತ್ತು ಅರುಣ್‌ ಸಿಂಗ್‌ ಸಮ್ಮುಖ ದಲ್ಲಿ ಮಂಗಳವಾರ ನವದೆಹಲಿಯಲ್ಲಿ ಬಿಜೆಪಿಗೆ ಅಧಿಕೃತ ವಾಗಿ ಸೇರ್ಪಡೆಯಾಗಿದ್ದಾರೆ.

Advertisement

ಅ.16 ರಂದು ಅವರು ರಾಜ್ಯಸಭೆಗೆ ರಾಜೀನಾಮೆ ನೀಡಿದ್ದು, ರಾಜೀನಾಮೆಯನ್ನು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅಂಗೀಕರಿಸಿದ್ದರು. ಕೆಲವೇ ದಿನಗಳ ಹಿಂದಷ್ಟೇ, ಕಾಂಗ್ರೆಸ್‌ನ ಭುವನೇಶ್ವರ ಕಲಿತ ಮತ್ತು ಸಂಜಯ್‌ ಸಿಂಗ್‌ ರಾಜೀನಾಮೆ ನೀಡಿದ್ದರು. ಇನ್ನೊಂದೆಡೆ, ಸಮಾಜವಾದಿ ಪಕ್ಷದಿಂದ ನೀರಜ್‌ ಶೇಖರ್‌, ಸುರೇಂದ್ರ ಸಿಂಗ್‌ ನಗರ್‌ ಮತ್ತು ಸಂಜಯ್‌ ಸೇಥ್‌ ಕೂಡ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ನಂತರ, ಇವರನ್ನು ಬಿಜೆಪಿಯಿಂದ ರಾಜ್ಯಸಭೆಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next