Advertisement

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

12:19 AM Apr 23, 2024 | Team Udayavani |

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ತೃಕ್ಕರಿಪುರ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಪಡನ್ನ ಕಡಪ್ಪುರದಲ್ಲಿ ಎನ್‌ಡಿಎ ಅಭ್ಯರ್ಥಿ ಎಂ.ಎಲ್‌. ಅಶ್ವಿ‌ನಿ ಅವರ ಚುನಾವಣೆ ಪ್ರಚಾರ ಸಭೆಗೆ ಸಿಪಿಎಂ ಕಾರ್ಯಕರ್ತರು ಅಡಚಣೆ ಉಂಟು ಮಾಡಿದ ದೂರಿನ ಹಿನ್ನೆಲೆಯಲ್ಲಿ ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಕಾಲಿಕಡವಿನಿಂದ ಪ್ರಚಾರ ಆರಂಭಿಸಿದ ಅಶ್ವಿ‌ನಿ ವೆಳ್ಳಿಚ್ಚಾಲ್‌, ಕರಿಪಾರತ್ತ್, ಉದಿನೂರು, ಓರಿ, ಮಾವಿಲಕಡಪುರ ಮೊದಲಾದೆಡೆ ಪರ್ಯಟನೆ ನಡೆಸಿದ ಪಡನ್ನ ಕಡಪ್ಪುರದಲ್ಲಿ ಸಭೆ ಆರಂಭಿಸಿದಾಗ ಸಿಪಿಎಂ ಕಾರ್ಯಕರ್ತರು ತಡೆಯೊಡ್ಡಿದರು. ಮಾತ್ರವಲ್ಲ ಅಭ್ಯರ್ಥಿಯನ್ನು ನಿಂದಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next