Advertisement

ಮಳೆ ಮುಗಿದ ಬಳಿಕ ಕಾರ್ನಿಕದ ಕಲ್ಲುರ್ಟಿ

02:37 PM Jul 19, 2018 | |

ಕಾರಣಿಕದ ಕಲ್ಲುರ್ಟಿ ದೈವದ ಜೀವನಾಧರಿತ ಕಥಾನಕವುಳ್ಳ ‘ಕಾರ್ನಿಕದ ಕಲ್ಲುರ್ಟಿ’ ಚಿತ್ರೀಕರಣ ಶೇ.70ರಷ್ಟು ಮುಗಿದಿದ್ದು, ಮಳೆಗಾಲ ಕಳೆದ ಮೇಲೆ ಎರಡನೇ ಹಂತದ ಶೂಟಿಂಗ್‌ ನಡೆಯಲಿದೆ. ಉದ್ಯಮಿ ಮಹೇಂದ್ರ ಕುಮಾರ್‌ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಚಿತ್ರ ಸೆಟ್ಟೇರುತ್ತಿದೆ.

Advertisement

ಗಂಗಾಧರ ಕಿರೋಡಿಯನ್‌ ಚಿತ್ರಕಥೆ, ಸಂಭಾಷಣೆ, ಕಲೆ, ವಸ್ತ್ರವಿನ್ಯಾಸ ಜವಾಬ್ದಾರಿ ಜತೆಗೆ ತಾಂತ್ರಿಕ ನಿರ್ದೇಶಕರು. ಉಮಾಪತಿ ಛಾಯಾಗ್ರಹಣ, ಹಿತನ್‌ ಹಾಸನ ಸಂಗೀತ. ಶೈಲೇಂದ್ರ ಡಿ.ಜೆ., ಚಾಂದಿನಿ ಅಂಚನ್‌, ಮಹೇಂದ್ರ ಕುಮಾರ್‌, ಶಾಲಿನಿ ಮರಕಡ, ರಘುರಾಮ್‌ ಶೆಟ್ಟಿ, ಹರಿಣಿ ಕೆಂಜಾರ್‌, ನಾಗೇಶ್‌ ಸಾಲಿಯಾನ್‌, ಲಾವಣ್ಯಾ ಕದ್ರಿ, ಮೋನಿಕಾ ಕೊಲ್ಯ, ವಿಕಾಸ್‌, ಮೋಹನ್‌ ಬೋಳಾರ್‌, ಅಮೀನ್‌ ಟೈಲರ್‌, ಶ್ರೀನಿವಾಸ ದೇವಾಡಿಗ, ಪ್ರಶಾಂತ್‌ ಜೋಗಿ, ಮನೋಜ್‌ ಭಂಡಾರಿ, ಕುಮಾರ್‌ ಪಾಲೆಮಾರ್‌, ಇಶಿಕಾ, ರೇಖಾ ರಂಜಿತ್‌ ಕದ್ರಿ, ರಾಜೇಶ್‌ ಆಚಾರ್ಯ ತಾರಾಗಣದಲ್ಲಿದ್ದಾರೆ.

ಚಿತ್ರ ನಿರ್ದೇಶಕ ಮಹೇಂದ್ರ ಕುಮಾರ್‌ ಹೇಳುವ ಪ್ರಕಾರ ಸತ್ಯದೇವತೆ ಕಲ್ಲುರ್ಟಿ ಬಗ್ಗೆ ನಂಬಿಕೆ ಇರುವವರು ತುಂಬ ಮಂದಿ ಇದ್ದಾರೆ. ಆದರೆ ಕಲ್ಲುರ್ಟಿ ಹಿನ್ನೆಲೆ, ಇತಿಹಾಸ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ಆದ್ದರಿಂದ ಹಿರಿಯರಿಂದ ಕಿರಿಯರವರೆಗೂ ತಿಳಿವಳಿಕೆ ನೀಡುವ ಉದ್ದೇಶದಿಂದ ಚಿತ್ರ ನಿರ್ಮಾಣಕ್ಕೆ ತೊಡಗಿದ್ದೇನೆ ಎನ್ನುತ್ತಾರೆ.

ದಿನೇಶ್‌ ಇರಾ,
ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next