Advertisement

Karnataka election ಶೆಟ್ಟರ್ ಅವರ ಸೋಲು ಖಚಿತ: ಹುಬ್ಬಳ್ಳಿಯಲ್ಲಿ ಶಾ

08:19 PM Apr 24, 2023 | Team Udayavani |

ಹುಬ್ಬಳ್ಳಿ: ಈ ಬಾರಿ ಜಗದೀಶ ಶೆಟ್ಟರ್ ಅವರ ಸೋಲು ಖಚಿತವಾಗಿದೆ. ಹಲವು ಹಿರಿಯರಿಗೆ ಬದಲಾವಣೆ ಮಾಡಿದಂತೆ ಶೆಟ್ಟರ್ ಅವರನ್ನು ಬದಲಾಯಿಸಿದ್ದೇವೆ. ಅದಕ್ಕೆ ಕಾರಣವನ್ನು ಅವರಿಗೆ ಹೇಳಿದ್ದೇವೆ. ಅದನ್ನು ಮತದಾರರ ಮುಂದೆ ಬಹಿರಂಗಪಡಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದೆ. ಅಲ್ಲಿ ಪಕ್ಷ ತನ್ನದೆಯಾದ ಮತಗಳನ್ನು ಹೊಂದಿದೆ. ಹೀಗಾಗಿ ಜಗದೀಶ ಶೆಟ್ಟರ್ ಅವರ ಸೋಲು ಖಚಿತವಾಗಿದೆ. ಹೊಸಬರಿಗೆ ಹಾಗೂ ಕಾರ್ಯಕರ್ತರಿಗೆ ಅವಕಾಶ ನೀಡಲು ಹಿರಿಯರಿಗೆ ಟಿಕೆಟ್ ನೀಡಿಲ್ಲ. ಅದರಂತೆ ಜಗದೀಶ ಶೆಟ್ಟರ್ ಅವರನ್ನು ಪರಿಗಣಿಸಿಲ್ಲ. ಇದಕ್ಕೆ ಕಾಣವನ್ನು ಕೂಡ ನೀಡಿದ್ದೇವೆ. ಅವರು ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಕ್ಷ ಯಾರ ಮುಷ್ಟಿಯಲ್ಲಿತ್ತು ಎಂದು ತಿರುಗೇಟು ನೀಡಿದರು.

ಬಿಜೆಪಿ ಸರಕಾರದ ವಿರುದ್ಧ ಮಾಡುತ್ತಿರುವ 40 ಪರ್ಸೆಂಟ್ ಆರೋಪಕ್ಕೆ ಯಾವುದೇ ದಾಖಲೆಗಳಿಲ್ಲ. ಆದರೆ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ, ಹಗರಣಗಳಿಗೆ ದಾಖಲೆಗಳಿವೆ‌. ಕೇಸುಗಳು ಕೂಡ ನಡೆಯುತ್ತಿವೆ. ರಾಜ್ಯದಲ್ಲಿ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂಬುವುದು ಕಾಂಗ್ರೆಸ್ ನಾಯಕ ಸೃಷ್ಟಿ ಮಾತ್ರ. ಇದೀಗ ಟಿಕೆಟ್ ನೀಡದಿರುವ ಹಿರಿಯ ನಾಯಕರ ಬದಲಾಗಿ ಲಿಂಗಾಯತ ಸಮಾಜದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next