Advertisement

Karnataka Election ಕಾಂಗ್ರೆಸ್ ಮುಕ್ತವಲ್ಲ,BJP ಮುಕ್ತ ರಾಜ್ಯ ಆಗುತ್ತಿದೆ:ಭೀಮಣ್ಣ‌ ಟಾಂಗ್

05:56 PM Apr 17, 2023 | Team Udayavani |

ಶಿರಸಿ: ಈವರೆಗೆ ಬಿಜೆಪಿಗರು ಕಾಂಗ್ರೆಸ್ ಮುಕ್ತ ರಾಜ್ಯ, ದೇಶ ಮಾಡುವದಾಗಿ ಹೇಳುತ್ತಿದ್ದರು. ಆದರೆ, ಈಗಿನ ಸ್ಥಿತಿ‌ ನೋಡಿದರೆ ಬಿಜೆಪಿ‌ ಮುಕ್ತ ರಾಜ್ಯ ಆಗುತ್ತದೆ. ಜಗದೀಶ ಶೆಟ್ಟರ್ ಅವರಂಥ ಹಿರಿಯ ನಾಯಕರು ಕಾಂಗ್ರೆಸ್ ಸೇರಿದ್ದಾರೆ ಎಂದು ಕೆಪಿಸಿಸಿ ಪ್ರಮುಖ, ಶಿರಸಿ ಕ್ಷೇತ್ರದ ಅಭ್ಯರ್ಥಿ ಭೀಮಣ್ಣ ನಾಯ್ಕ ಪ್ರತಿಪಾದಿಸಿದರು.

Advertisement

ಅವರು ನಗರದಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆಗೂ ಮೊದಲು ನಡೆಸಿದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಅಭಿವೃದ್ದಿ ಮಾತ್ರ ಮಂತ್ರವಾಗಿಸಿದ ಜಾತ್ಯಾತೀತ ಪಕ್ಷ ಕಾಂಗ್ರೆಸ್. ನಮ್ಮದು ಸ್ವಾರ್ಥದ ಪಾರ್ಟಿ ಅಲ್ಲ‌ ಎಂದರು.

ಶಿರಸಿ ಕ್ಷೇತ್ರದಲ್ಲಿ 30 ವರ್ಷ ಶಾಸಕರಾಗಿ ಅನುಭವ ಇರುವವರು ಮಾಡಿದ ಸಾಧನೆ ಏನು? ಸಿದ್ದಾಪುರ, ಶಿರಸಿ ವೃತ್ತಗಳಿಗೆ ಬೀದಿ ದೀಪ ಅಳವಡಿಸಿದರೆ ಮಾತ್ರ ಅಭಿವೃದ್ದಿಯಾ ಎಂದು ಸ್ಪೀಕರ್ ಕಾಗೇರಿ ಅವರನ್ನು ಕೇಳಿದ ಭೀಮಣ್ಣ, ಪ್ರತೀ ವರ್ಷ ಕೋಟಿ ಕೋಟಿ ಅನುದಾನ ತರುವ ಸಾಧ್ಯತೆ ಇದ್ದವರು ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದಾರೆ ಎಂದೂ ವಾಗ್ದಾಳಿ ಮಾಡಿದರು. ಕೊಟ್ಟ ಕೊನೆಯ ಹಳ್ಳಿಗೂ ಅಭಿವೃದ್ದಿ ಆದಾಗ ಮಾತ್ರ ಅಭಿವೃದ್ದಿ ಆಗಲಿದೆ.ಹಳ್ಳಿಗಳಲ್ಲಿ ಬಡವರ ಕಷ್ಟ ನೀಗಿಲ್ಲ ಎಂದರು.

ಈ ವೇಳೆ ಹೋರಾಟಗಾರ ಎ.ರವೀಂದ್ರ ನಾಯ್ಕ, ವಸಂತ ನಾಯ್ಕ, ದೀಪಕ ದೊಡ್ಡೂರು, ಜಗದೀಶ ಗೌಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next