Advertisement

ಸೀತೆಗೂ ಪ್ರತಿಮೆ ನಿರ್ಮಿಸಿ

09:35 AM Dec 15, 2018 | Team Udayavani |

ಲಕ್ನೋ: ‘ಶ್ರೀರಾಮನ ಪ್ರತಿಮೆ ಪಕ್ಕದಲ್ಲೇ ಸೀತಾಮಾತೆಯ ಪ್ರತಿಮೆಯನ್ನೂ ನಿರ್ಮಿಸಿ. ‘ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ನಿರ್ಮಿಸುವುದಾಗಿ ಘೋಷಿಸಿದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ  ಅವರಿಗೆ ಇಂಥದ್ದೊಂದು ಸಲಹೆ ನೀಡಿದವರು ಕಾಂಗ್ರೆಸ್‌ ಮುಖಂಡ ಕರಣ್‌ ಸಿಂಗ್‌. ಈ ಸಂಬಂಧ ಸಿಎಂ ಯೋಗಿಗೆ ಪತ್ರ ಬರೆದಿರುವ ಸಿಂಗ್‌, “ತಾವು ಸಿದ್ಧಪಡಿಸಿದ ಪ್ರಸ್ತಾವನೆಯಲ್ಲಿ ರಾಮನ ಪ್ರತಿಮೆಯ ಎತ್ತರ ಸ್ವಲ್ಪ ಕಡಿಮೆ ಮಾಡಿಕೊಂಡು, ಅದರ ಅರ್ಧದಷ್ಟು ವೆಚ್ಚದಲ್ಲಿ ಸೀತಾಮಾತೆಯ ಪ್ರತಿಮೆಯನ್ನೂ ನಿರ್ಮಿಸಿ’ ಎಂದಿದ್ದಾರೆ. ಇದೇ ವೇಳೆ ರಾಮಾಯಣದ ‘ಅಗ್ನಿ ಪರೀಕ್ಷೆ’ ಕಥೆಯನ್ನೂ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಕಡೇ ಪಕ್ಷ ಸಾವಿರ ವರ್ಷದ ಬಳಿಕವಾದರೂ ಅಯೋಧ್ಯೆಯಲ್ಲಿ ಸೀತೆಗೊಂದು ಸ್ಥಾನ ಸಿಗಲಿ ಎಂದು ಕಾಲೆಳೆಯುವ ರೀತಿ ಪತ್ರ ಬರೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next