Advertisement

Kaup: ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ- ಫೆ. 18: ಶ್ರೀಮನ್ಮಹಾರಥೋತ್ಸವ

11:03 PM Feb 15, 2024 | Team Udayavani |

ಕಾಪು: ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಫೆ. 18ರಂದು ಶ್ರೀಮನ್ಮಹಾರಥೋತ್ಸವ ಜರಗಲಿದೆ. ಪೂರ್ವಾಹ್ನ 10.30ಕ್ಕೆ ರಥಾರೋಹಣ, ಮಹಾ ಅನ್ನಸಂತರ್ಪಣೆ, ಭಜನೆ, ರಾತ್ರಿ 8ಕ್ಕೆ ಶ್ರೀಮನ್ಮಹಾರಥೋತ್ಸವ, ಉತ್ಸವ ಬಲಿ, ಕಟ್ಟೆಪೂಜೆ, ಭೂತ ಬಲಿ, ಶಯನ ನಡೆಯಲಿದೆ.

Advertisement

ಫೆ. 19ರಂದು ಬೆಳಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಸಂಜೆ 4ರಿಂದ ಕಟ್ಟೆಪೂಜೆ, ಓಕುಳಿ, ಬಡಗು ಸವಾರಿ, ದಂಡತೀರ್ಥ ಮಠದ ಕೆರೆಯಲ್ಲಿ ಅವಭೃಥ ಸ್ನಾನ, ತೂಟೆದಾರ, ಧ್ವಜಾವರೋಹಣ ನಡೆಯಲಿದೆ.

ಫೆ. 20ರಂದು ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ, ಫೆ. 22ರಂದು ದೇಗುಲದ ನಾಗಬನದಲ್ಲಿ ಆಶ್ಲೇಷಾ ಬಲಿ ಸೇವೆ, ಸಮಾರಾಧನೆ, ಫೆ. 24ರಂದು ಶ್ರೀ ಕಲ್ಕುಡ ಧರ್ಮ ದೈವದ ನೇಮ ನಡೆಯಲಿದೆ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿ ಅರುಣ್‌ ಕುಮಾರ್‌ ಬಿ.ಕೆ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next