Advertisement

Kannada ಶಾಲೆ ಕೊಲ್ಲುವ ಯತ್ನ; ನಿರಂತರ ಪಠ್ಯ ಬದಲಾವಣೆ.. :ರೋಹಿತ್ ಚಕ್ರತೀರ್ಥ

05:59 PM Sep 28, 2023 | Team Udayavani |

ಶಿರಸಿ: ನಿರಂತರ ಪಠ್ಯ‌ ಬದಲಾವಣೆ, ರಾಷ್ಟ್ರೀಯ ಶಿಕ್ಷಣ‌ ನೀತಿ ಅನುಸರಣೆ ಮಾಡದಿದ್ದರೆ ಕನ್ನಡ ಹಾಗೂ‌ ಸರಕಾರಿ ಶಾಲೆಗಳನ್ನು ಕೊಲ್ಲುವ ವ್ಯವಸ್ಥಿತ ಪ್ರಯತ್ನವಾಗುತ್ತದೆ ಎಂದು ಪಠ್ಯ ಪುಸ್ತಕ ಪುನರ್ ರಚನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅಸಮಧಾನ ವಕ್ತಪಡಿಸಿದರು.

Advertisement

ಗುರುವಾರ‌ ಸೋದೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿ, ‘ಹಿಂದಿನ ಪಠ್ಯ ಪುಸ್ತಕದಲ್ಲಿ ಏನು ಹಾಗೂ ಯಾಕಾಗಿ ಬದಲಾವಣೆ ಮಾಡಲು ನೂತನ ಸಮಿತಿ ರಚನೆ ಎಂಬುದು ಹೇಳಿಲ್ಲ. ಸಚಿವರು, ಅಧಿಕಾರಿಗಳು ಯಾರೂ ಬದಲಾವಣೆ‌ ಕುರಿತು ನನ್ನನ್ನೂ ಈವರೆಗೂ ಕೇಳಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಪಠ್ಯ ಬದಲಾವಣೆಯ ತೀರ್ಮಾನ ಕೈಗೊಂಡಿದ್ದೂ ಸರಿಯಲ್ಲ. ಇದು ಮಕ್ಕಳ, ಪಾಲಕರಲ್ಲಿ ಗೊಂದಲ ಉಂಟಾಗಲು ಕಾರಣವಾಗುತ್ತದೆ ಎಂದರು.

ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯ ಸಮಿತಿ ರಚನೆ ಮಾಡಿದ ಪಠ್ಯ ಬದಲಾವಣೆ ಮಾಡುವಾಗ ನಾವು ಸಾರ್ವಜನಿಕವಾಗಿ ತಿಳಿಸಿದ್ದೆವು. ಕಾರಣವನ್ನೂ ಹೇಳಿದ್ದೆವು. ಈವರೆಗೆ ನನ್ನನ್ನು ಯಾರೂ ಈಗಿನ ಬದಲಾವಣೆ ಯಾಕಾಗಿ‌ ಎಂದು ಕೇಳಿಲ್ಲ. ನನ್ನ ಅಭಿಪ್ರಾಯ ಮಂಡಿಸಲು ಈಗಲೂ ಮುಕ್ತವಾಗಿದ್ದೇನೆ ಎಂದರು.

ಪಠ್ಯ ಪುಸ್ತಕ ರಚನಾ ಸಮಿತಿ ಪರಿಷ್ಕರಣೆ ವಿಚಾರದಲ್ಲಿ ನಾಲ್ಕೈದು ಅಧ್ಯಕ್ಷರ ನೇಮಕಾತಿ ಆಗಿದೆ. ನಾನು ಹೇಳುವುದು ಏನೂ ಇಲ್ಲ. ಯಾವ ಕಾರಣಕ್ಕೆ?, ಯಾವುದು?, ಏನು? ಯಾಕೆ ಸೇರಿಸ್ತಾ ಇದ್ದಾರೆ ಗೊತ್ತಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next