Advertisement

ವಿಶ್ವ ಭಾಷೆಗಳಲ್ಲಿ ಕನ್ನಡಕ್ಕೆ ಉನ್ನತ ಸ್ಥಾನ: ಡಾ|ಮೂಲಗೆ

12:13 PM Nov 19, 2018 | |

ಬೀದರ: ವಿಶ್ವದ ಹಲವಾರು ಭಾಷೆಗಳಲ್ಲಿ ಕನ್ನಡ ಭಾಷೆ ಅತ್ಯುನ್ನತ ಸ್ಥಾನದಲ್ಲಿದೆ. ಪ್ರಾಚೀನ ಕಾಲದಿಂದಲೂ ಕನ್ನಡ ಭಾಷೆ ಉತ್ಕೃಷ್ಟ ಭಾಷೆಯಾಗಿ ಮೆರೆಯುತ್ತಿದ್ದು, ಕನ್ನಡದ ಪ್ರಥಮ ಶಾಸನ ಹಲಿಡಿ ಶಾಸನದಲ್ಲಿ ಕನ್ನಡ ಭಾಷೆಯ ಇತಿಹಾಸ ಸಾರುತ್ತಿದೆ ಎಂದು ಮಹಾರಾಷ್ಟ್ರದ ಉದಗೀರನ ಉದಯಗಿರಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ರಮೇಶ ಮೂಲಗೆ ಹೇಳಿದರು.

Advertisement

ನಗರದ ಕೃಷ್ಣ ರಿಜೇನ್ಸಿ ಸಭಾಂಗಣದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಬೀದರ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರಿಸ್ತಪೂರ್ವದಲ್ಲಿಯೂ ಕನ್ನಡ ಭಾಷೆ ಶ್ರೇಷ್ಠವಾಗಿತ್ತು. ಅಮೋಘವರ್ಷ ನೃಪತುಂಗರ ಆಸ್ಥಾನ ಕವಿ ಶ್ರೀವಿಜಯ ಬರೆದ ಕವಿರಾಜಮಾರ್ಗದಲ್ಲಿ ಕನ್ನಡ ನಾಡು ಮಹಾರಾಷ್ಟ್ರದ ನಾಸಿಕದಲ್ಲಿ ಉದಯಿಸುವ ಗೋದಾವರಿ ನದಿಯಿಂದ ಕರ್ನಾಟಕದ ತಲಕಾವೇರಿಯಿಂದ ಉದಯಿಸಿ ತಮಿಳುನಾಡಿನಲ್ಲಿ ಹರಿಯುವ ಕಾವೇರಿವರೆಗೆ ಪಸರಿಸಿತ್ತು. ಕನ್ನಡ ಭಾಷೆ ಮಹಾರಾಷ್ಟ್ರದಿಂದ ತಮಿಳುನಾಡಿನ ವರೆಗೆ ಕನ್ನಡ ಆಡು ಭಾಷೆಯಾಗಿತ್ತು ಎಂದು ತಿಳಿಸಿದರು.

9ನೇ ಶತಮಾನದ ವಡ್ಡರಾಧನೆ ಗ್ರಂಥದಲ್ಲಿ ಕನ್ನಡ ಭಾಷೆಯಲ್ಲಿ 16 ಜೈನ ಕಥೆಗಳಿವೆ. ಪಂಪ, ರನ್ನ, ಜನ್ನ ಅವರು ಅತ್ಯುತ್ತಮ ಸಾಹಿತ್ಯವನ್ನು ನೀಡಿ, ಕನ್ನಡ ಭಾಷೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಸರ್ವಶ್ರೇಷ್ಠ ಸಾಹಿತ್ಯ ನೀಡುವ ಮೂಲಕ ಕನ್ನಡ ವಿಶ್ವಮಾನ್ಯ ಭಾಷೆಯನ್ನಾಗಿ ಮಾಡಿದ ಶ್ರೇಯಸ್ಸು ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದರು.

ಹಳೆಗನ್ನಡದಲ್ಲಿ ಅನೇಕ ಕವಿಗಳು ಉತ್ತಮ ಹಾಗೂ ಉತ್ಕೃಷ್ಠ ಸಾಹಿತ್ಯ ನೀಡಿದ್ದಾರೆ. ಅದೇ ರೀತಿ ಹೊಸಗನ್ನಡದಲ್ಲಿ 8 ಜನರು ಜ್ಞಾನಪೀಠ ಪ್ರಶಸ್ತಿ ಪಡೆದು ಕನ್ನಡ ಭಾಷೆಯನ್ನು ಮತಷ್ಟೊ ಅಗ್ರಸ್ಥಾನಕ್ಕೆ ಕೊಂಡೊಯ್ದಿದಿದ್ದಾರೆ ಎಂದು ವಿವರಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿಜಯಲಕ್ಷ್ಮೀ ಮಾತನಾಡಿ, ಇಂದಿನ ಜಾಗತಿಕರಣದ ಯುಗದಲ್ಲಿ ಕನ್ನಡ ಭಾಷೆಗೆ ಕುತ್ತು ಬಾರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯಕರ್ತವ್ಯವಾಗಿದೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಮಾತ್ರ 30 ದಿನಗಳ ಕಾಲ ಕನ್ನಡ ಕನ್ನಡ ಎನ್ನದೇ 365 ದಿನಗಳ ಕಾಲ ಕನ್ನಡ ಕನ್ನಡ ಎಂದು ಕನ್ನಡ ಭಾಷಾ ಪ್ರೇಮ ತೋರಬೇಕು ಎಂದರು.

Advertisement

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಸಂಜೀವಕುಮಾರ ಅತಿವಾಳೆ ಮಾತನಾಡಿ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಶಿಕ್ಷಕರ, ಅಧ್ಯಾಪಕರ, ಉಪನ್ಯಾಸಕರ, ಪಾಲಕರ, ಕನ್ನಡಪರ ಹೋರಾಟಗಾರರ ಹಾಗೂ ಕನ್ನಡ ಮಾಧ್ಯಮದಲ್ಲಿ ಓದುವ ಶಾಲಾ ಮಕ್ಕಳ ಪಾತ್ರ ಮಹತ್ತರವಾಗಿದೆ ಎಂದರು.

ಸಾಹಿತಿ ಚಂದ್ರಪ್ಪ ಹೆಬ್ಟಾಳಕರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ನಿವೃತ್ತ ಉಪನ್ಯಾಸಕ ಸಿದ್ರಾಮ ಸಪಾಟೆ, ಬೆಳಗು ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್‌ ಅಧ್ಯಕ್ಷ ಅನೀಲಕುಮಾರ ದೇಶಮುಖ, ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಾಮರಾವ್‌ ನೆಲವಾಡೆ, ರವೀಂದ್ರ ಲಂಜವಾಡಕರ್‌, ಶಿವಕುಮಾರ ಚನ್ನಶೆಟ್ಟಿ, ಡಾ| ರಾಜಕುಮಾರ ಅಲ್ಲೂರೆ, ಭಾನುಪ್ರಿಯಾ ಅರಳಿ, ಪ್ರಿಯಾ ಲಂಜವಾಡಕರ್‌, ಡಾ|ಶ್ರೇಯಾ ಮಹೇಂದ್ರಕರ್‌, ಮಂಗಲಾ ಚನ್ನಶೆಟ್ಟಿ, ಸುನೀತಾ ಬಿರಾದಾರ, ಕೆ.ಎಂ. ವಿಶ್ವನಾಥ ಮರತೂರ, ಮಾಣಿಕ ನೇಳಗೆ, ಪ್ರೋ| ನಾಗಮ್ಮ ಭಂಗರಗಿ, ಪ್ರಕಾಶ ದೇಶಮುಖ, ಮೇನಕಾ ಪಾಟೀಲ, ಕೀರ್ತಿಲತಾ ಬಿರಾದಾರ, ಓಂಕಾರ ಪಾಟೀಲ, ಅಜೀತ್‌ ಅಶೋಕ ಶಿಂಧೆ, ಆತ್ಮಾನಂದ ಬಂಬುಳಗಿ, ಅವಿನಾಶ ಸೋನೆ, ರವಿ ಜಾಂಪಡೆ,
ಸ್ವರೂಪರಾಣಿ ನಾಗೂರೆ, ಸವಿತಾ ಮಾಶೆಟ್ಟೆ, ನಾಗಮೂರ್ತಿ ಪಾಂಚಾಳ, ಮೋಹನರಾವ್‌ ಪಾಟೀಲ, ಉಷಾರಾಣಿ, ಬಸವಚೇತನ ಚೆನ್ನಶೆಟ್ಟಿ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next